HEALTH TIPS

ಕುಡುಕ ನೌಕರರನ್ನು ಹಿಡಿಯಲು ತಪಾಸಣೆ: ಸಾಮೂಹಿಕ ರಜೆಗೆ ಹೊರಳಿದ ಕೆ.ಎಸ್.ಆರ್.ಟಿ.ಸಿ.ನೌಕರರು: ಪ್ರಯಾಣಿಕರು ಸಂಕಷ್ಟದಲ್ಲಿ

                 ಕೊಲ್ಲಂ; ಪತ್ತನಾಪುರಂನ ಕೆಎಸ್‍ಆರ್‍ಟಿಸಿ ಡಿಪೋದಲ್ಲಿ ಸಾಮೂಹಿಕ ರಜೆಯ ವಾತಾವರಣ ಸೃಷ್ಟಿಯಾಗಿದೆ. ಕುಡಿದ ಅಮಲಿನಲ್ಲಿ ಕೆಲಸಕ್ಕೆ ಬಂದವರ ಪತ್ತೆಗೆ ಜಾಗೃತ ದಳ ಡಿಪೋದಲ್ಲಿ ತಪಾಸಣೆ ನಡೆಸಿದ್ದರಿಂದ ಹಲವರು ಕಾಲ್ಕಿತ್ತಿರುವರು. 

                 ಇಬ್ಬರು ಚಾಲಕರು ಪಾನಮತ್ತರಾಗಿದ್ದರು. ಇದರಿಂದಾಗಿ ನೌಕರರು ಎಚ್ಚರಿಕೆ ನೀಡದೆ ಸಾಮೂಹಿಕ ರಜೆ ಹಾಕಿದ್ದಾರೆ. ಇದರಿಂದಾಗಿ ಕೊಲ್ಲಂ, ಕೊಟ್ಟಾರಕ್ಕರ, ಪುನ್ನಾಲ, ಏನಾತ್ ಮತ್ತು ಕಕ್ಕಡಂ ಭಾಗಗಳಿಗೆ ಸುಮಾರು 15 ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

                ಸೇವೆ ಸ್ಥಗಿತಗೊಂಡಿದ್ದು, ಬಿಸಿಲಿನ ತಾಪದಿಂದ ಹಲವು ಪ್ರಯಾಣಿಕರು ಪರದಾಡಿದರು. ಪಾನಮತ್ತರಾಗಿ ವಾಹನ ಚಲಾಯಿಸುವವರ ವಿರುದ್ಧ ಹಾಗೂ ವಿನಾಕಾರಣ ರಜೆ ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪತ್ತನಂತಿಟ್ಟ ವಿಜಿಲೆನ್ಸ್ ಇನ್ಸ್‍ಪೆಕ್ಟರ್ ಜಯಚಂದ್ರ ಪಿಳ್ಳೈ, ಅಧಿಕಾರಿಗಳಾದ ಪ್ರಕಾಶ್ ಚಂದ್ರನ್ ಮತ್ತು ಅನುಪ್ ಪರಿಶೀಲನೆ ನಡೆಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries