HEALTH TIPS

ಜೀರೋದಿಂದ ಹೀರೋ ಆಗುವುದು ಹೇಗೆ?: ಗೋಪಾಡ್ಕರ್

Top Post Ad

Click to join Samarasasudhi Official Whatsapp Group

Qries

             ಬದಿಯಡ್ಕ: ಜೀರೋದಿಂದ ಮಕ್ಕಳು ಹೀರೋ ಆಗುವುದು ಹೇಗೆ? ಒಳ್ಳೆಯ ಕೆಲಸಗಳನ್ನು ಮಾಡುವ ಶಿಕ್ಷಕರಿಗೆ ಪೂರಕ ಪರಿಕರಗಳು ದೊರೆತಾದ ಮಕ್ಕಳು ವಿಜಯದತ್ತ ಸಾಗುತ್ತಾರೆ. ಕಲಿಕೆಯ ಆಸಕ್ತಿಯ ಕಡೆಗೆ ಮಕ್ಕಳನ್ನು ಸೆಳೆಯಬೇಕು. ಎಚ್ಚರಿಕೆಯಲ್ಲಿರುವ ದಿನದ 16 ಗಂಟೆಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ನಾವು ನಿರ್ಧರಿಸಬೇಕು ಎಂದು ಸ್ವರೂಪ ಅಧ್ಯಯನ ಕೇಂದ್ರದ ಮುಖ್ಯಸ್ಥ ಗೋಪಾಡ್ಕರ್ ಹೇಳಿದರು.

             ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಕಳೆದ 6ದಿನಗಳಿಂದ ನಡೆಯುತ್ತಿರುವ `ಸ್ವರೂಪ ಶಿಕ್ಷಣ ಸ್ಮøತಿ ಮಂಟಪ' ಎಂಟುದಿನಗಳ ಶಿಬಿರದ 7ನೇದಿನ ಶಿಬಿರಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.


       ಶಿಬಿರದ ವಿದ್ಯಾರ್ಥಿಗಳ ಪಾಲಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕೇವಲ ನಾಲ್ಕು ಗೋಡೆಗಳ ಮಧ್ಯ ಜೀವನ ಆಗಬಾರದು. ಕಲಿಯುವುದು ಹೇಗೆ ಎಂಬುದನ್ನು ಕಲಿಸುವುದೇ ಈ ಶಿಬಿರದ ಉದ್ದೇಶವಾಗಿದೆ. ಇದು ಅದಲ್ಲ ಎಂಬುದೇ ನಮ್ಮ ಧ್ಯೇಯವಾಕ್ಯವಾಗಿದೆ. ನಮ್ಮದೇ ಆದ ಚಿಂತನೆಗಳನ್ನು ಮಕ್ಕಳಲ್ಲಿ ಪ್ರಯೋಗಿಸಿ ಅದರಿಂದ ಯಶಸ್ಸನ್ನು ಕಂಡಿದ್ದೇವೆ. ಇದೊಂದು ಉತ್ತಮವಾದ ಶಿಕ್ಷಣ ಸಂಸ್ಥೆ ಎಂಬುದಕ್ಕೆ ಇಲ್ಲಿನ ಶಿಬಿರಾರ್ಥಿಗಳೇ ಉದಾಹರಣೆ. ಸಾಧಕ ವಿದ್ಯಾರ್ಥಿಗಳನ್ನು ನೀಡುವ ಸಂಸ್ಥೆಯಾಗಿ ಈ ಶಾಲೆ ಬೆಳೆದಿದೆ ಎಂದರು.

           ಶಿಬಿರಾರ್ಥಿಗಳು ತಾವು ಕಲಿತ ವಿದ್ಯೆಗಳನ್ನು ಪ್ರದರ್ಶಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಶಿಬಿರದ ಕುರಿತು ಮಾತನಾಡಿದರು. ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ, ಪಾಲಕರುಗಳಾದ ಗಂಗಾಧರ ತೆಕ್ಕೆಮೂಲೆ,  ಡಾ.ಬೇ.ಸೀ. ಗೋಪಾಲಕೃಷ್ಣ ಭಟ್, ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಸುಮಾಡ್ಕರ್, ಅನಂತ ಚಡಗ, ಪಾಲಕರು ಪಾಲ್ಗೊಂಡಿದ್ದರು.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries