HEALTH TIPS

ಕಣಿಪುರ ಸನ್ನಿಧಿಯಲ್ಲಿ 11 ರಂದು ಪಂಚಾಮೃತ, ಎಳನೀರು ಅಭಿಷೇಕ, ಉತ್ಸವ

                    ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕಣಿಪುರೇಶನಿಗೆ ಮೇ 11 ರಂದು ಪಂಚಾಮೃತ, ಎಳನೀರು ಅಭಿಷೇಕ ಮತ್ತು ಉತ್ಸವ ಜರಗಲಿದೆ. ಆ ಪ್ರಯುಕ್ತ ಬೆಳಗ್ಗೆ 9.30ಕ್ಕೆ ಪ್ರಾರ್ಥನೆ, 10ರಿಂದ ಶ್ರೀ ದೇವರಿಗೆ ಪಂಚಾಮೃತ ಮತ್ತು ಎಳನೀರು ಅಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಶ್ರೀಬಲಿ, 1 ರಿಂದ ಅನ್ನದಾನ, ಸಂಜೆ 6.30ಕ್ಕೆ ದೀಪಾರಾಧನೆ, ಭಜನೆ, ರಾತ್ರಿ 7.30 ರಿಂದ ಮಹಾಪೂಜೆ, ಶ್ರೀಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ.

            ವರ್ಷಂಪ್ರತಿ ಆರಾಟು ಮಹೋತ್ಸವದ ಮರುದಿನ ಜರಗಬೇಕಿದ್ದ ಅಭಿಷೇಕವು ಈ ವರ್ಷ ಬ್ರಹ್ಮಕಲಶದ ಬಳಿಕ ದೃಢಕಲಶ ನಡೆಯಲಿರುವ ಹಿನ್ನೆಲೆಯಲ್ಲಿ ಮೇ 11ರಂದು ನೆರವೇರಿಸುವುದಾಗಿ ತೀರ್ಮಾನಿಸಲಾಗಿದೆ. ಆದ್ದರಿಂದ ಶ್ರೀ ದೇವರಿಗೆ ಪಂಚಾಮೃತ ಸಾಮಗ್ರಿ, ಎಳನೀರು ಅರ್ಪಿಸುವವರು ಬೆಳಗ್ಗೆ 9 ರೊಳಗೆ ದೇವಸ್ಥಾನಕ್ಕೆ ತಂದೊಪ್ಪಿಸಬೇಕಾಗಿ ವಿನಂತಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries