HEALTH TIPS

ವಿಝಿಂಜಂ ಬಂದರಿಗೆ ಕೇಂದ್ರ ಸರ್ಕಾರದ ಮತ್ತೊಂದು ಕೊಡುಗೆ: ಭೂಗತ ರೈಲು ಮಾರ್ಗಕ್ಕಾಗಿ 1200 ಕೋಟಿ ಶೀಘ್ರ ಅನುಮೋದನೆ

               ಪತ್ತನಂತಿಟ್ಟ: ಕೇರಳದ ಆರ್ಥಿಕತೆಗೆ ಬಹುದೊಡ್ಡ ಉತ್ತೇಜನ ನೀಡಲಿರುವ ವಿಝಿಂಜಂ ಅಂತರಾಷ್ಟ್ರೀಯ ಬಂದರಿಗೆ ಕೇಂದ್ರ ಸರ್ಕಾರದ ಮತ್ತೊಂದು ಕೊಡುಗೆ ನೀಡಿದ್ದು, ಅಂತಾರಾಷ್ಟ್ರೀಯ ಬಂದರಿಗೆ ಪೂರಕವಾಗಿ ಭೂಗತ ರೈಲು ಮಾರ್ಗ ನಿರ್ಮಾಣಕ್ಕೆ ಈ ತಿಂಗಳು ಕೇಂದ್ರದ ಅನುಮೋದನೆ ದೊರೆಯಲಿದೆ.           1200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಸದ್ಯದಲ್ಲೇ ನಿರ್ಮಾಣ ಹಂತದಲ್ಲಿರುವ ರಸ್ತೆಗೆ ಕೇಂದ್ರ ಪರಿಸರ ಸಚಿವಾಲಯ ಹಸಿರು ನಿಶಾನೆ ತೋರಲಿದೆ ಎಂದು ತಿಳಿದುಬಂದಿದೆ. 

                   ಕಳೆದ ತಿಂಗಳು ವಿಝಿಂಜಂ ಸೀಪೋರ್ಟ್‍ನ ಅಧಿಕಾರಿಗಳು ಅನುಮತಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಸಚಿವಾಲಯ ಕೋರಿದ ದಾಖಲೆಗಳನ್ನು ಹಸ್ತಾಂತರಿಸಿದ್ದರು, ಸಮಿತಿಯ ಶಿಫಾರಸು ಪಡೆದ ತಕ್ಷಣ ಕೇಂದ್ರದ ಅನುಮತಿ ಪಡೆಯುತ್ತೇವೆ ಎಂದು ಬಂದರು ಅಧಿಕಾರಿಗಳು ಸ್ಪಷ್ಟ್ಟಪಡಿಸಿದ್ದಾರೆ. ರಸ್ತೆಯು ಒಂಬತ್ತು ಕಿಲೋಮೀಟರ್ ಉದ್ದವಿರಲಿದ್ದು, ಭೂಗತ ರಸ್ತೆಗಳೂ ಇರಲಿವೆ. 

                  ಇದಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಅಧಿಸೂಚನೆ ಹೊರಡಿಸಿ ಬಲರಾಮಪುರಂ, ಅಟಿಯನ್ನೂರ್, ಪಳ್ಳಿಚಲ್ ಮತ್ತು ವಿಜಿಂಜಂ ಎಂಬ ನಾಲ್ಕು ಗ್ರಾಮಗಳಿಗೆ ಸೇರಿದ ಭೂಸ್ವಾಧೀನಕ್ಕೆ 200 ಕೋಟಿ ರೂ.ಮೀಸಲಿಡಲಾಗಿದೆ. ನಿರ್ಮಾಣ ಪೂರ್ಣಗೊಂಡಾಗ, ತಿರುವನಂತಪುರಂ ಸೆಂಟ್ರಲ್ ರೈಲ್ವೇ ನಿಲ್ದಾಣದ ನಿರ್ಮಾಣದೊಂದಿಗೆ ಬಲರಾಮಪುರಂ ಸರಕು ಸಾಗಣೆಯ ಕೇಂದ್ರವಾಗಲಿದೆ.

                ಇದು ದಕ್ಷಿಣ ಕೇರಳದಲ್ಲಿ ಮೊದಲ ದೂರದ ಭೂಗತ ರೈಲು ಮಾರ್ಗವಾಗಲಿದೆ. ಧನಬಾದ್‍ನ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಮೈನಿಂಗ್ ಅಂಡ್ ರಿಸರ್ಚ್ ಸೆಂಟರ್ ಸುರಂಗ ಮಾರ್ಗದ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ.

                 ಮಾರ್ಗವು ಕರಿಂಬಳಿಕಲ್ ಭಾಗದಲ್ಲಿ ಇಳಿದು ಅಲ್ಲಿಂದ ಕಂಬಗಳ ಮೇಲೆ ಸಾಗಿ ಬಂದರನ್ನು ತಲುಪುತ್ತದೆ. ಕೊಂಕಣ ರೈಲು ನಿಗಮ ನಿರ್ಮಾಣದ ಹೊಣೆ ಹೊತ್ತಿದೆ. ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ ಆಧುನಿಕ ರೀತಿಯಲ್ಲಿ ಸುರಂಗ ರಸ್ತೆ ನಿರ್ಮಿಸಲಾಗುವುದು ಎಂದು ಸಂಬಂಧಪಟ್ಟವರು ಮಾಹಿತಿ ನೀಡಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries