HEALTH TIPS

12ರಂದು ಬಂಟರ ಸಂಘ ಮಧೂರು ಪಂಚಾಯತ್ ಸಮಾವೇಶ, ಕಾರ್ಯಾಲಯದ ಉದ್ಘಾಟನೆ


            ಮಧೂರು: ಬಂಟರ ಸಂಘ ಮಧೂರು  ಪಂಚಾಯತ್ ಸಮಾವೇಶ ನೂತನ ಕಾರ್ಯಾಲಯದ ಉದ್ಘಾಟನೆ ಹಾಗೂ ತೆರೆದ ರಂಗ ಮಂದಿರದ ಲೋಕಾರ್ಪಣೆ ಸಮಾರಂಭ ಮೇ 12ರಂದು ಮಧೂರು ಸಮೀಪದ ಪರಕ್ಕಿಲ ದಲ್ಲಿ ಜರುಗಲಿದೆ.  ಬೆಳಿಗ್ಗೆ 8ಕ್ಕೆ ಶ್ರೀ ಮಹಾ ಗಣಪತಿ ಹೋಮ ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿರುವುದು.

          11ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿರುವುದು. ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ  ಉದ್ಘಾಟಸುವರು. ಮಧೂರು ಸಮಿತಿ ಬಂಟರ ಸಂಘದ ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸುವರು. ಬೆಂಗಳೂರು ಬಂಟರ ಸಂಘದ ಶೈಕ್ಷಣಿಕ ಸಾಂಸ್ಕøತಿಕ ವಿಭಾಗ ಸಂಚಾಲಕ ಸದಾನಂದ ಸುಲಾಯ, ಚಲನ ಚಿತ್ರ ನಟ,  ನಿರ್ದೇಶಕ ಶಿವಧ್ವಜ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು 

             ಕರ್ನಾಟಕ ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ. ಸುಬ್ಬಣ್ಣ ರೈ, ಪ್ರಶಸ್ತಿ ವಿಜೇತ ಪತ್ರಕರ್ತ ರಾಜೇಶ್ ರೈ ಚಟ್ಲ, ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮದನ ರೈ ಎಂಬಿವರನ್ನು  ಸನ್ಮಾನಿಸಲಾಗುವುದು.  ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾದ ವಕೀಲ ಬಿ. ಸುಬ್ಬಯ್ಯ ರೈ, ಮಾಜಿ ಅಧ್ಯ ವಕೀಲ ಎ ಸದಾನಂದ ರೈ,  ಮಂಗಳೂರು ಹರಿಕಥಾ ಪರಿಷತ್ ಅಧ್ಯಕ್ಷ ವಕೀಲ ಕೆ. ಮಹಾಬಲ ಶೆಟ್ಟಿ , ನಿವೃತ್ತ ಮುಖ್ಯೋಪಾಧ್ಯಾಯ ಬಂಟರ ಸಂಘದ ಹಿರಿಯ ಕಾರ್ಯಕರ್ತ ಎಸ್ ಎನ್ ರಾಮ ಶೆಟ್ಟಿ ಅತಿಥಿಗಳಾಗಿ ಭಾಗವಸುವರು.

           ಬಂಟರ ಸಂಸ್ಕೃತಿ ಸಂಪ್ರದಾಯ ಗಳ ಕುರಿತು ಡಾ. ವಿದ್ಯಾ ಮೋಹನ ದಾಸ್ ರೈ ವಿಶೇಷ ಉಪನ್ಯಾಸ ನೀಡುವರು ಕಾಸರಗೋದು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕಚ್ಚಿಕ್ಕಾಡ್ ಸನ್ಮಾನಿತರನ್ನು ಪರಿಚಯಿಸುವರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries