HEALTH TIPS

ಸುಂದರ ಬಾರಡ್ಕÀರಿಗೆ ಗೌರವಾಭಿನಂದನೆ 12 ರಂದು

                 ಬದಿಯಡ್ಕ: ಅಂಬೇಡ್ಕರ್ ವಿಚಾರ ವೇದಿಕೆ ಬದಿಯಡ್ಕ ಇದರ ಆಶ್ರಯದಲ್ಲಿ ಇತ್ತೀಚೆಗೆ ದ್ರಾವಿಡ ಭಾಷಾ ಸಾಹಿತ್ಯ ಪ್ರಶಸ್ತಿ ಪುರಸ್ಕøತರಾದ ಕವಿ, ಸಂಘಟಕ, ತುಳು-ಕನ್ನಡ ಹೋರಾಟಗಾರ ಸುಂದರ ಬಾರಡ್ಕ ಅವರಿಗೆ ಗೌರವಾಭಿನಂದನೆ ಸಮಾರಂಭ ಮೇ. 12 ರಂದು ಬೆಳಿಗ್ಗೆ 10 ರಿಂದ ಬದಿಯಡ್ಕ ಬಾರಡ್ಕದ 'ಆಶ್ರಯ'ದಲ್ಲಿ ಆಯೋಜಿಸಲಾಗಿದೆ. 

             ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಜನಪ್ರಿಯ ವೈದ್ಯ, ಸಾಹಿತ್ಯ-ಸಾಂಸ್ಕøತಿಕ ಸಂಘಟ ಡಾ. ಶ್ರೀನಿಧಿ ಸರಳಾಯ  ಬದಿಯಡ್ಕ ಉದ್ಘಾಟಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ  ತಾರಾನಾಥ ಗಟ್ಟಿ ಕಾಪಿಕಾಡು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಪೆರಿಯ ಕೇಂದ್ರೀಯ ವಿ.ವಿ.ಯ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಸೌಮ್ಯ ಎಚ್. ಉಪಸ್ಥಿತರಿರುವರು. ಕಾಸರಗೋಡು ಸರ್ಕಾರಿ ಕೇಲೇಜಿನ ಪ್ರಾಧ್ಯಾಪಕಿ ಡಾ. ಆಶಾಲತಾ ಸಿ.ಕೆ. ಅಭಿನಂದನಾ ಭಾಷಣ ಮಾಡುವರು.  ಅಖಿಲೇಶ್ ನಗುಮುಗಂ ಶುಭಹಾರೈಸುವರು. ಬಾರಡ್ಕ ವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷ  ಶಂಕರ ಕನಕಪ್ಪಾಡಿ, ಮಂಜುನಾಥ ಕಲಾವೃಂದದ ಕಾರ್ಯದರ್ಶಿ ಸತ್ಯರಾಜ್ ಬಿ. ಬಾರಡ್ಕ ಶೌರ್ಯ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ನಿರಂಜನ ಬಾರಡ್ಕ, ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ರಾಮ ಪಟ್ಟಾಜೆ, ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ, ತುಳುವೆರೆ ಆಯನೊ ಕೂಟದ ಕಾರ್ಯದರ್ಶಿ ಜಯ ಮಣಿಯಂಪಾರೆ ಮೊದಲಾದವರು ಉಪಸ್ಥಿತರಿರುವರು. 

           ಈ ಸಂದರ್ಭ ಮಧ್ಯಾಹ್ನ 12 ರಿಂದ ನಡೆಯಲಿರುವ ಬಹುಭಾಷಾ ಕವಿ ಸಂಗಮ ನಡೆಯಲಿದ್ದು, ಕಾರ್ಟೂನ್ ಕಾಸರಗೋಡು ಅಧ್ಯಕ್ಷ, ಸಾಹಿತಿ ವೆಂಕಟ ಭಟ್ ಎಡನೀರು ಉದ್ಘಾಟಿಸುವರು. ಕವಿ ರವೀಂದ್ರನ್ ಪಾಡಿ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಜಿಲ್ಲೆಯ ಯುವ ಕವಿಗಳಿಂದ ತುಳು, ಕನ್ನಡ, ಮಲಯಾಳ, ಇಂಗ್ಲೀಷ್, ಹಿಂದಿ, ಕೊಂಕಣಿ, ಮರಾಟಿ, ಬ್ಯಾರಿ, ಕರ್ಹಾಡ ಭಾಷೆಗಳಲ್ಲಿ ಕವನ ವಾಚನ ನಡೆಯಲಿದೆ.  ವನಜಾಕ್ಷಿ ಚೆಂಬ್ರಕಾನ, ಶರಣ್ಯ ನಾರಾಯಣ್, ದಿವ್ಯಾ ಗಟ್ಟಿ ಪರಕ್ಕಿಲ ನಿರ್ವಹಿಸುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries