HEALTH TIPS

ಪ್ರತಿ ಲೀಟರ್ ಗೆ 15 ರೂ.: ಹೊಸ ಶುದ್ಧ ನೀರು ಸರಬರಾಜು ಯೋಜನೆಗೆ ಮುಂದಾದ ಕೆ.ಎಸ್.ಆರ್.ಟಿ.ಸಿ

                ತಿರುವನಂತಪುರಂ: ಪ್ರಯಾಣಿಕರಿಗೆ ಶುದ್ಧ ನೀರು ಒದಗಿಸಲು ಕೆಎಸ್‍ಆರ್‍ಟಿಸಿ ಹೊಸ ಯೋಜನೆ ರೂಪಿಸಿದೆ. ಸರ್ಕಾರದ ಉಪಕ್ರಮವಾದ ಹಿಲ್ಲಿ ಆಕ್ವಾ ಸಹಯೋಗದಲ್ಲಿ ಹೊಸ ಕುಡಿಯುವ ನೀರಿನ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ.

                ಯೋಜನೆಯ ಪ್ರಕಾರ ಸೂಪರ್ ಫಾಸ್ಟ್ ನಿಂದ ಹೈ ರೇಂಜ್ ವರೆಗಿನ ಎಲ್ಲ ಸೇವೆಗಳಲ್ಲಿ ಲೀಟರ್ ಗೆ 15 ರೂ.ನಂತೆ ಶುದ್ಧ ನೀರು ಪೂರೈಸುವ ವ್ಯವಸ್ಥೆ ಜಾರಿಗೆ ತರಲಾಗುವುದು.

              ಇದಲ್ಲದೇ ಕೆಎಸ್‍ಆರ್‍ಟಿಸಿ ನಿಲ್ದಾಣಗಳಲ್ಲಿ ಶುದ್ಧ ನೀರಿನ ವ್ಯವಸ್ಥೆ ಮಾಡಲಾಗುವುದು. ಕೆಎಸ್‍ಆರ್‍ಟಿಸಿ ಬಲ್ಕ್ ಖರೀದಿ ವ್ಯವಸ್ಥೆಯನ್ನು ಸಿದ್ಧಪಡಿಸುತ್ತಿದೆ. ಎಳನೀರು ಸಹ ಸಗಟು ದರದಲ್ಲಿ ಲೀಟರ್‍ಗೆ 10 ರೂ.ನಂತೆ ವಿತರಿಸಲು ಸಂಸ್ಥೆ ಮುಂದಾಗಿದೆ.

           ಕಡಮೆ ದರದಲ್ಲಿ ಪ್ರಯಾಣಿಕರಿಗೆ ಶುದ್ಧ ಹಾಗೂ ಗುಣಮಟ್ಟದ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ಹಿಲ್ಲಿ ಆಕ್ವಾ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries