HEALTH TIPS

ಸಂಭ್ರಮದೊಂದಿಗೆ ಸಂಪನ್ನಗೊಂಡ ಕುಂಜತ್ತೂರು ಪ್ರೌಢಶಾಲೆಯ 1992 -93 ಶೈಕ್ಷಣಿಕ ವರ್ಷದ ಪೂರ್ವ ವಿದ್ಯಾರ್ಥಿಗಳ ಗುರು ವಂದನಾ ಹಾಗೂ ಸ್ನೇಹ ಸಂಗಮ

              ಮಂಜೇಶ್ವರ: ಕುಂಜತ್ತೂರು ಫ್ರೌಢಶಾಲೆಯ 1992-93 ನೇ ಶೈಕ್ಷಣಿಕ ವರ್ಷದ ಹಳೆ ವಿದ್ಯಾರ್ಥಿಗಳ  ಗುರು ವಂದನಾ ಹಾಗೂ ಸ್ನೇಹ ಸಂಗಮ ಸಮಾರಂಭ ಬಾನುವಾರ ಯಶಸ್ವಿಯಾಗಿ ನೆರವೇರಿತು. 

             ಶಾಲಾ ಹಳೆ ವಿದ್ಯಾರ್ಥಿ ಹಾಗೂ ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುಜಾತ ಎಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಜಿ. ದೀಪ ಬೆಳಗಿಸಿ ಉದ್ಘಾಟಿಸಿದರು.

          ಶಾಲಾ ಹಳೆ ವಿದ್ಯಾರ್ಥಿ ಹಾಗೂ ಉದ್ಯಮಿ ಎಂ ಪಿ ಇಸ್ಮಾಯಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಾ. ಮನ್ಸೂರ್ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಪತ್ರಕರ್ತ ರಹ್ಮಾನ್ ಉದ್ಯಾವರ ಉಪಸ್ಥಿರಿದ್ದರು.

             ಈ ಸಂದರ್ಭ ಈಶ್ವರ ಮಾಸ್ತರ್, ಸರಸ್ವತಿ ಟೀಚರ್, ಆನಂದ ಮಾಸ್ತರ್, ಪ್ರಸನ್ನ ಟೀಚರ್, ಅನಿತಾ ಟೀಚರ್, ಶಿಶುಪಾಲನ್, ಗ್ರಾ.ಪಂ. ಸದಸ್ಯ ರಾಜೇಶ್ ಸಹಿತ ಹಲವು ವಲಯಗಳ ಗಣ್ಯರು ಉಪಸ್ಥಿತರಿದ್ದರು.

         ಹಳೆ ವಿದ್ಯಾರ್ಥಿಗಳು ಮತ್ತೆ ಒಂದೇ ವೇದಿಕೆಯಲ್ಲಿ ಸೇರಿದ ಈ ಅಪರೂಪದ ಕಾಯಕ್ರಮದ ಜೊತೆಗೆ ನೆನಪುಗಳ ಜಾತ್ರೆಗೆ ಸ್ನೇಹ ಸಂಗಮ ಸಮಾರಂಭ ಸಾಕ್ಷಿಯಾಯಿತು. ವಿದ್ಯಾರ್ಥಿಗಳು ಜೀವನದ ಎಲ್ಲಾ ಅಮೂಲ್ಯ ಕ್ಷಣಗಳನ್ನು ಹಂಚಿಕೊಂಡು ಕಳೆದು ಹೋದ ಜೀವನವನ್ನು ಮೆಲುಕಾಡಿದರು.

            ಬಳಿಕ ನಿವೃತ ಅಧ್ಯಾಪಕ ಈಶ್ವರ ಮಾಸ್ತರ್ ಯೋಗದಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಾಗೂ ವೈದ್ಯರಿಂದ ದೂರವಿರುವ ಕೆಲವೊಂದು ಸೂತ್ರಗಳನ್ನು ವಿವರಿಸಿ ಕೊಟ್ಟರು.

           ವೇದಿಕೆಯಲ್ಲಿ ಅಧ್ಯಾಪಕರುಗಳನ್ನು ಹಾಗೂ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಖಲೀಲ್ ಬಜಾಲ್ ಸ್ವಾಗತಿಸಿ, ಹರಿಣಾಕ್ಷಿ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries