HEALTH TIPS

ಕೊಟ್ಟಿಯೂರಿನಲ್ಲಿ ಅಷ್ಟಮಿ ಆರಾಧನೆ ಮತ್ತು ಇಳನಿರಾಟ್ಟಂ: ಜೂನ್ 2 ರಂದು ರೇವತಿ ಆರಾಧನೆ ಮತ್ತು ಜೂನ್ 6 ರಂದು ರೋಹಿಣಿ ಪೂಜೆ

           ಕಣ್ಣೂರು: ಕೊಟ್ಟಿಯೂರು ಪೆರುಮಾಳ್ ಸನ್ನಿಧಿಯಲ್ಲಿ ಅಷ್ಟಮಿ ಆರಾಧನೆ ಹಾಗೂ ಇಳನೀರಾಟಂ ನ್ನು ಭಕ್ತರು ಭಕ್ತಿ ಭಾವದಿಂದ ಕಣ್ತುಂಬಿಕೊಂಡರು.

             ಭಂಡಾರÀದ ಮುಂದೆ ಮಧ್ಯಾಹ್ನ ಶಿವೇಲಿಯ ನಂತರ ಅಷ್ಟಮಿಪಟ್ಟ ಎಂದು ಕರೆಯಲ್ಪಡುವ ಅಷ್ಟಮಿ ಆರಾಧನೆಯನ್ನು ಮಾಡಲಾಯಿತು. ಪೂಜೆಯನ್ನು ಸ್ಥಳೀಯ ಅರ್ಚಕ ಪಂಥಿರಾಡಿ ಕಂಬ್ರ ನೆರವೇರಿಸಿದರು.

             ಇಳನೀರು ಕಾವುಗಳನ್ನು ವ್ರತದಾರಿಗಳು ಬುಧವಾರ ತಿರುವಂಚಿರಕ್ಕೆ ಕರೆತಂದಿದ್ದು, ನಿನ್ನೆ ಬೆಳಗ್ಗೆ ಉಷಪೂಜೆಯ ಬಳಿಕ ಕೈಕೋಲನವರು ಅವುಗಳನ್ನು ಸಿದ್ಧಪಡಿಸಿ ಅಭಿಷೇಕಕ್ಕೆ ತಂದರು. ಕೋವಿಲಕಂ ಕಯಾಲದ ದೊರೆ ಕೈಕೋಲನ್ ನೇತೃತ್ವದ 30 ಸದಸ್ಯರ ಗುಂಪು ಎಲ್ಲಾ ಇಳನೀರನ್ನು ಸಿದ್ಧಪಡಿಸಿ ಮಣಿತ್ತರಕ್ಕೆ ವರ್ಗಾಯಿಸಿತು. ಈ ತಂಡವು ತಿರುವಂಚಿರ ನಿರ್ವಹಣೆ ಮತ್ತು ಕಾಣಿಕೆ ವಿತರಣೆಯ ಜವಾಬ್ದಾರಿಯನ್ನು ಹೊಂದಿದೆ.

           ಇಳನೀರಾಟಂ ಮುಂಚೆಯೇ ಉಕ್ರಕಾಲಾಯನ ಸ್ಥಾನಿಕನು ಕುರಿಚ್ಯ ಸೈನಿಕರೊಂದಿಗೆ ಕೊಟ್ಟೇರಿಕಾವ್‍ನಿಂದ ತನ್ನ ಇಡೀ ದೇಹಕ್ಕೆ ಬಣ್ಣ ಬಳಿದು, ತಿರುವಂಚಿರವನ್ನು ಪ್ರವೇಶಿಸಿ, ಮಣಿತ್ತರದ ಬಳಿಯ ಮುಖ ಮಂಟಪವನ್ನು ತಲುಪಿ, ಚಪ್ಪರ ಕತ್ತಿಗಳಿಗೆ ನಮಸ್ಕರಿಸಿ ಅಕ್ಕಿ, ಕಳಬ  ಮತ್ತು ಪ್ರಸಾದದೊಂದಿಗೆ ಹಿಂದಿರುಗುವ ಸಮಾರಂಭ ಇದು. 

            ಅಜ್ಜನ ಆಗಮನದ ನಂತರ ಇಳನೀರಾಟಂ ನಡೆಯಲಿದೆ. ಸಿದ್ಧಪಡಿಸಿದ ಇಳನೀರುನ್ನು ಸಮುದಾಯದ ಭಟ್ಟತಿರಿಪಾಡ್ ಅವರ ನೇತೃತ್ವದಲ್ಲಿ ಉಷಕಾಂಬ್ರಮ್ ನಂಬೂದಿರಿ ಸ್ವಯಂಭೂ ಅಭಿμÉೀಕ ನೆರವೇರಿಸಿದರು. ವೈಶಾಖ ಹಬ್ಬದ ಮೂರನೇ ಆರಾಧನೆಯಾದ ರೇವತಿ ಆರಾಧನೆಯು ಜೂನ್ 2 ರಂದು ಮತ್ತು ಕೊನೆಯ ಪೂಜೆಯಾದ ರೋಹಿಣಿ ಆರಾಧನೆಯು ಜೂನ್ 6 ರಂದು ನಡೆಯಲಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries