HEALTH TIPS

ಮಣಿಪುರ: 34 ಬಂಡುಕೋರರ ಶರಣಾಗತಿ

           ಗುವಾಹಟಿ: 'ಯುನೈಟೆಡ್‌ ನ್ಯಾಷನಲ್‌ ಲಿಬರೇಷನ್‌ ಫ್ರಂಟ್‌' (ಯುಎನ್‌ಎಲ್‌ಎಫ್‌) ಸಂಘಟನೆಯ ಪಾಂಬೆಯಿ ಬಣದ 34 ಸದಸ್ಯರು ಶುಕ್ರವಾರ ಅಸ್ಸಾಂ ರೈಫಲ್ಸ್‌ ಮುಂದೆ ಶರಣಾಗಿದ್ದಾರೆ.

           ಬಂಡುಕೋರರು ಮ್ಯಾನ್ಮಾರ್‌ನಿಂದ ಮಣಿಪುರಕ್ಕೆ ನುಸುಳಲು ಯತ್ನಿಸುತ್ತಿದ್ದ ವೇಳೆ ತೆಂಗನೌಪಲ್ ಜಿಲ್ಲೆಯ ಬಳಿ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದರು.

            ತೀವ್ರವಾದ ಗುಂಡಿನ ಚಕಮಕಿ ನಡೆದ ಬಳಿಕ ಬಂಡುಕೋರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಿದ್ದಾರೆ.

               'ಮ್ಯಾನ್ಮಾರ್‌ನ ಮತ್ತೊಂದು ಸಂಘಟನೆ ಪೀಪಲ್ಸ್‌ ಡಿಫೆನ್ಸ್‌ ಪೋರ್ಸ್‌ (ಪಿಡಿಎಫ್‌) ಮತ್ತು ಯುಎನ್‌ಎಲ್‌ಎಫ್‌ ಸಂಘಟನೆ ನಡುವೆ ಕೆಲ ದಿನಗಳಿಂದ ಕದನ ನಡೆಯುತ್ತಿದೆ. ಈ ಕಾರಣಕ್ಕೆ ಸುರಕ್ಷತೆಯ ಉದ್ದೇಶದಿಂದ ಬಂಡುಕೋರರು ಮಣಿಪುರಕ್ಕೆ ನುಸುಳಲು ಯತ್ನಿಸುತ್ತಿದ್ದಾರೆ' ಎಂದು ಮೂಲಗಳು ತಿಳಿಸಿವೆ.

                   ಪಾಂಬೆಯಿ ಬಣವು ಕಳೆದ ವರ್ಷ ನವೆಂಬರ್‌ನಲ್ಲಿ ಕೇಂದ್ರ ಮತ್ತು ಮಣಿಪುರ ರಾಜ್ಯ ಸರ್ಕಾರದೊಂದಿಗೆ ಕದನ ವಿರಾಮಕ್ಕೆ ಸಹಿ ಮಾಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries