ಮಂಜೇಶ್ವರ : ಕಳೆದ 85 ದಿವಸಗಳಿಂದ ಮಂಜೇಶ್ವರ ರಾಗಂ ಜಂಕ್ಷನಿನಲ್ಲಿ ಅಂಡರ್ ಪಾಸ್ ಬೇಡಿಕೆಯನ್ನಿಟ್ಟು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಯುತಿದ್ದರೂ ಅಧಿಕಾರಿಗಳ ಭಾಗದಿಂದಾಗಲೀ ಜನಪ್ರತಿನಿಧಿಗಳ ಭಾಗದಿಂದಾಗಲೀ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ.
ಈ ಹಿನ್ನೆಯಲ್ಲಿ 85 ನೇ ದಿನಕ್ಕೆ ಕಾಲಿಟ್ಟ ಅನಿರ್ಧಿಷ್ಟಾವಧಿ ಮುಷ್ಕರ ನಡೆಯತ್ತಿರುವ ವೇದಿಕೆಗೆ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅವರು ಆಗಮಿಸಿ ದಿನದಿಂದ ದಿನಕ್ಕೆ ಬಿಸಿಯೇರುತ್ತಿರುವ ಪ್ರತಿಭಟನೆಗೆ ತಂಪೆರೆಚಿದ್ದಾರೆ.
ಯು ಎಲ್ ಸಿ ಸಿ ಅಧಿಕಾರಿಗಳಲ್ಲಿ ನಿರಂತರವಾಗಿ ನಡೆಸಿದ ಒತ್ತಾಯದ ಫಲವಾಗಿ ಗುತ್ತಿಗೆದಾರರು ಶೀಘ್ರ ಕಾಲ್ನಡೆ ಮೇಲ್ಸೇತುವೆಯನ್ನು ನಿರ್ಮಿಸಿ ಕೊಡಲು ತಯರಾಗಿರುವ ಬಗ್ಗೆ ಶುಭ ಸಂದೇಶ ನೀಡಿದ್ದಾರೆ.
ಆದರೆ ಇಲ್ಲಿಯ ಜನತೆಗೆ ಅಂಡರ್ ಪಾಸ್ ಆಗಲೇ ಬೇಕೆಂಬ ಒತ್ತಾಯ ಇರುವ ಕಾರಣ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ನೂತನ ಸಂಸದರೊಂದಿಗೆ ಚರ್ಚಿಸಿ ಆ ಪ್ರಯತ್ನವನ್ನು ಕೂಡಾ ಮುಂದುವರಿಸಲಿರುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾ.ಹೆದ್ದಾರಿ ಹೋರಾಟ ಸಮಿತಿ ಪದಾಧಿಕಾರಿಗಳು ನಮಗೆ ಬೇಕಾಗಿರುವುದು ಕಾಲ್ನಡೆ ಅಂಡರ್ ಪಾಸ್. ಅದು ಸಾಕಾರವಾಗುವ ತನಕ ಪ್ರತಿಭಟನೆಯ ತೀವೃತೆಯನ್ನು ಹೆಚ್ಚಿಸಲಿದ್ದೇವೆ. ಆದರೆ ಶಾಸಕರು ನೀಡಲಿರುವ ಕಾಲ್ನಡೆ ಸೇತುವೆಯನ್ನು ಸ್ವಾಗತಿಸಿರುವುದಾಗಿ ತಿಳಿಸಿದ್ದಾರೆ.