HEALTH TIPS

ಮಗನ ಪತ್ನಿ ನೀಡಿದ ವರದಕ್ಷಿಣೆ ಮೊತ್ತ ವಸೂಲಿ ಮಾಡಲು ಕೋರ್ಟ್ ತೀರ್ಪು: ಸಂಕಷ್ಟದಲ್ಲಿ 87 ವರ್ಷದ ಅತ್ತೆ

                   ಇಡುಕ್ಕಿ: ಸೊಸೆ ನೀಡಿದ ವರದಕ್ಷಿಣೆ ಹಣ ವಸೂಲಿಗಾಗಿ 87 ವರ್ಷದ ಮಹಿಳೆಯ ಮನೆ ಕೆಡವಲಾಗಿದೆ. ಕೌಟುಂಬಿಕ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ವನ್ನಪುರಂ ಕಂಜಿರಂಕಾವಲ ಪರವಿಲದಲ್ಲಿರುವ ತಂಗಮ್ಮ ಸ್ಯಾಮ್ಯುಯೆಲ್ ಅವರ ಮನೆ ನೆಲಸಮಗೊಂಡಿದೆ. ಘಟನೆಯ ವೇಳೆ ತಂಕಮ್ಮ ಕೂತಟ್ಟುಕುಲಂ ಆಸ್ಪತ್ರೆಯಲ್ಲಿದ್ದರು.

                    ಒಂದು ದಿನ ಮಗಳ ಮನೆಯಲ್ಲಿ ತಂಗಿದ್ದ ತಂಗಮ್ಮ ಮರುದಿನ ಮನೆಗೆ ಬಂದಾಗ ತಾನು ವಾಸವಾಗಿದ್ದ ಮನೆ ಕೆಡವಿರುವುದು ಕಂಡು ಬಂತು. ತಂಗಮ್ಮ ಮನೆ ಕೆಡವಿದ ಬಗ್ಗೆ ಪೆÇಲೀಸರಿಗೆ ದೂರು ನೀಡಿದ್ದು, ನ್ಯಾಯಾಲಯದ ಆದೇಶ ಜಾರಿಯಾಗಿರುವುದರಿಂದ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿಲ್ಲ ಎಂದು ತಂಗಮ್ಮಗೆ ತಿಳಿಸಲಾಯಿತು. ಕಾಳಿಯಾರ್  ಪಂಚಾಯಿತಿಯಿಂದ ಮಂಜೂರು ಮಾಡಿದ ಹಣದಲ್ಲಿ ಮನೆ ನಿರ್ಮಿಸಿಕೊಂಡಿದ್ದರು. .

            ತಂಗಮ್ಮ ಅವರಿಗೆ ಒಂಬತ್ತು ಮಂದಿ ಮಕ್ಕಳಿದ್ದು, ಈ ಪೈಕಿ 3 ಮಂದಿ  ಈಗಾಗಲೇ ಮೃತರಾಗಿದ್ದು, 6 ಮಕ್ಕಳು ಈಗಿದ್ದಾರೆ.  ಇಬ್ಬರು ಅವಿವಾಹಿತರು ತಂಕಮ್ಮ ಅವರೊಂದಿಗೆ ವಾಸಿಸುತ್ತಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries