HEALTH TIPS

ರಸ್ತೆಯಲ್ಲಿ ಸತ್ತುಬಿದ್ದ ನಾಗರಹಾವಿಗೆ ಅಂತ್ಯಸಂಸ್ಕಾರ

          ಬದಿಯಡ್ಕ: ರಸ್ತೆಯಲ್ಲಿ ಸಂಚರಿಸುತ್ತಿದ್ದ ಯಾವುದೋ ವಾಹನದ ಅಡಿಗೆ ಬಿದ್ದು ಸಾವನ್ನಪ್ಪಿದ ನಾಗರಹಾವಿಗೆ ಊರವರು, ವಾಹನ ಸವಾರರು ಸೇರಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ನೀರ್ಚಾಲು ಬದಿಯಡ್ಕ ರಸ್ತೆಯ ಕನ್ನೆಪ್ಪಾಡಿ ಸಮೀಪ ತಿರುವಿನಲ್ಲಿ ಸೋಮವಾರ ಮುಸ್ಸಂಜೆ ವೇಳೆ ರಸ್ತೆಯ ಮಧ್ಯ ಭಾಗದಲ್ಲಿ ಚಡಪಡಿಸುತ್ತಿದ್ದ ನಾಗರಹಾವನ್ನು ವಾಹನ ಸವಾರರು ಕುಡಿಯಲು ನೀರನ್ನು ನೀಡಿ ಕೋಲಿನಿಂದ ಎತ್ತಿ ಬದಿಗೆ ತರಲು ಯತ್ನಿಸುತ್ತಿದ್ದ ವೇಳೆ ಅದು ಸಾವನ್ನಪ್ಪಿದೆ. ಕೂಡಲೇ ಅವರು ನೀರ್ಚಾಲಿನ ಗಣೇಶ ಕೃಷ್ಣ ಅಳಕ್ಕೆ ಅವರನ್ನು ಸಂಪರ್ಕಿಸಿದರು. ಅವರು ಆಗಮಿಸಿ ಎಲ್ಲರ ಸಹಕಾರದೊಂದಿಗೆ ಅಂತಿಮ ವಿಧಿವಿಧಾನಗಳಿಗೆ ನೇತೃತ್ವ ವಹಿಸಿದರು. ವಾಹನ ಸವಾರರ ಸ್ಥಳೀಯರು ಸಹಕಾರವನ್ನು ನೀಡಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries