ಕುಂಬಳೆ: ಕೇರಳದ ಸಹಕಾರಿ ರಂಗ ಕೇರಳದ ಎಡರಂಗ ಸರ್ಕಾರದ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗುವಂತಾಗಿದೆ ಎಂಬುದಾಗಿ ಎಂದು ಸಹಕಾರ ಭಾರತಿ ಪ್ರಾಂತ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರು ತಿಳಿಸಿದ್ದಾರೆ.
ಅವರು ಕುಂಬಳೆ ಪೈ ಸಭಾಂಗಣದಲ್ಲಿ ನಡೆದ ಸಹಕಾರ ಭಾರತಿ ಮಂಜೇಶ್ವರ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಕರು ಹಾಗೂ ಜನಸಾಮಾನ್ಯರ ವಿಶೇಷವಾಗಿ ಗ್ರಾಮೀಣ ಜನರ ಅತ್ಯಂತ ವಿಶ್ವಸ್ಥ ಸಹಕಾರಿ ಸಂಸ್ಥೆಗಳು ಅವರ ಪಾಲುದಾರಿಕೆಯಿಂದಲೇ ಸ್ಥಾಪಿತಗೊಂಡಿದ್ದು, ಕೃಷಿ, ಹೈನುಗಾರಿಕೆ, ಗ್ರಾಮೀಣ ಕಸುಬುಗಳು ಹಾಗೂ ವ್ಯಾಪಾರ ಅಭಿವೃದ್ಧಿ ಮೂಲಕ ಆರ್ಥಿಕ ಸಬಲೀಕರಣಕ್ಕೆ ಇದು ಸಹಕಾರಿಯಾಗಿದೆ. ಕೃಷಿಕರಿಂದ ರೂಪುಗೊಂಡ ಇಂತಹ ಸಂಸ್ಥೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕೃಷಿಕನ ಧ್ಯೇಯವಾಗಬೇಕು ಎಂದು ತಿಳಿಸಿದರು.
ಕ್ಯಾಂಪೆÇ್ಕೀ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಹಕಾರಿ ಸಂಘಗಳು ಬರಿಯ ಆರ್ಥಿಕ ವ್ಯವಹಾರಗಳಿಗೆ ಸೀಮಿತವಾಗದೆ ಗ್ರಾಮೀಣ ಪ್ರದೇಶದ ರೈತರ ಆವಶ್ಯಕತೆಗಳನ್ನು ಪೂರೈಸುವುದರೊಂದಿಗೆ ಗ್ರಾಮೀಣ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಿರುವುದಾಗಿ ತಿಳಿಸಿದರು.
ಸಹಕಾರ ಭಾರತಿ ಮಂಜೇಶ್ವರ ತಾಲೂಕು ಸಮಿತಿ ಅಧ್ಯಕ್ಷ ಅಶೋಕ ಬಾಡೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಪದ್ಮರಾಜ ಪಟ್ಟಾಜೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರ ನಾರಾಯಣ ಭಟ್ ಕಿದೂರು ಮಾರ್ಗದರ್ಶನ ನೀಡಿದರು. ಅಶ್ವಿನಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ವಂದನಾರ್ಪಣೆ ಮಾಡಿದರು. ಸ್ವಾಗತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಶೋಕ್ ಬಾಡೂರು ಅಧ್ಯಕ್ಷ, ತುಕಾರಾಮ ಕುಂಬಳೆ, ಬಾಲಕೃಷ್ಣ ಶೆಟ್ಟಿ ಮೀನಾರು ಉಪಾಧ್ಯಕ್ಷರು, ಕೃಷ್ಣ ಮೂರ್ತಿ ನೂಜಿ ಕಾರ್ಯದರ್ಶಿ,ಜಿತೇಷ್ ನಾಯ್ಕಾಪು ಜತೆ ಕಾರ್ಯದರ್ಶಿ, ವಿಶ್ವನಾಥ ಶೆಟ್ಟಿ, ವಿಶ್ವೇಶ್ವರ ಭಟ್ ಸದಸ್ಯರಾಗಿರುವ ನೂತನ ಸಮಿತಿ ರಚಿಸಲಾಯಿತು.