ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯ ಹೈಸ್ಕೂಲ್ ವಿಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ದಿವಸವೇತನ ಆಧಾರದಲ್ಲಿ ನೇಮಕಾತಿ ನಡೆಯಲಿದೆ. ಎಲ್ಪಿಎಸ್ಟಿ ಕನ್ನಡ, ಯುಪಿಎಸ್ಟಿ ಮಲೆಯಾಳ, ಜೂನಿಯರ್ ಹಿಂದಿ, ಎಚ್ಎಸ್ಟಿ ಹಿಂದಿ, ಎಚ್ಎಸ್ಟಿ ಗಣಿತ (ಕನ್ನಡ), ಎಚ್ಎಸ್ಟಿ ಗಣಿತ (ಮಲೆಯಾಳ), ಎಚ್ಎಸ್ಟಿ ಫಿಸಿಕಲ್ ಸಯನ್ಸ್(ಮಲೆಯಾಳ), ಎಚ್ಎಸ್ಟಿ ಇಂಗ್ಲಿಷ್ ತಲಾ ಒಂದು ಹುದ್ಧೆಗಳಿಗೆ ಸಂದರ್ಶನ ಜೂನ್ 1ರಂದು ಬೆಳಿಗ್ಗೆ 11ಕ್ಕೆ ಶಾಲಾ ಕಛೇರಿಯಲ್ಲಿ ನಡೆಯಲಿದ್ದು ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ಅರ್ಹತಾ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಬೇಕೆಂದು ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ದೂರವಾಣಿ: 6282808854 ಸಂಪರ್ಕಿಸಬಹುದು.
..................................................................................................................................
ದೇಲಂಪಾಡಿ ಶಾಲೆಯಲ್ಲಿ
ಮುಳ್ಳೇರಿಯ: ಜಿವಿಎಚ್ಎಸ್ಎಸ್ ದೇಲಂಪಾಡಿ ಶಾಲೆಯಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಖಾಲಿ ಇರುವ ಈ ಕೆಳಗಿನ ಶಿಕ್ಷಕರ ಹುದ್ದೆಗಳಿಗೆ ದಿವಸವೇತನ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿ ನಡೆಯಲಿದೆ. ಜೂನಿಯರ್ ಅರೇಬಿಕ್- 1, ಎಚ್ಎಸ್ಟಿ ಗಣಿತ (ಕನ್ನಡ) -1, ಎಚ್ಎಸ್ಟಿ ಸಮಾಜವಿಜ್ಞಾನ (ಕನ್ನಡ)- 1, ಎಚ್ಎಸ್ಟಿ ಮಲಯಾಳ- 1, ಎಚ್ಎಸ್ಟಿ ಹಿಂದಿ -1 ಹುದ್ಧೆಗಳಿಗೆ ಮೇ 31ರಂದು ಬೆಳಿಗ್ಗೆ 10ಕ್ಕೆ ಶಾಲಾ ಕಛೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಅಭ್ಯರ್ಥಿಗಳು ತಮ್ಮ ಮೂಲ ಅರ್ಹತಾ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಬೇಕೆಂದು ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9495461331, 9916241496 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
………………………………………………………………………………………………………………………………………………
ಬಂದಡ್ಕ ಶಾಲೆಯಲ್ಲಿ
ಮುಳ್ಳೇರಿಯ: ಬಂದಡ್ಕ ಸಮೀಪದ ಮಾಣಿಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಪಿಎಸ್ಟಿ(ಕನ್ನಡ)- 2 ಹುದ್ಧೆಗಳು ಖಾಲಿ ಇದ್ದು ದಿವಸವೇತನ ಆಧಾರದಲ್ಲಿ ನೇಮಕಾತಿ ನಡೆಯಲಿದೆ. ಸಂದರ್ಶನ ಮೇ 30ರಂದು ಬೆಳಿಗ್ಗೆ 10.30ಕ್ಕೆ ಶಾಲಾ ಕಛೇರಿಯಲ್ಲಿ ನಡೆಯಲಿದ್ದು ಅರ್ಹರಾದವರು ತಮ್ಮ ಮೂಲ ಅರ್ಹತಾ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಬೇಕೆಂದು ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ದೂರವಾಣಿ: 9495826392 ಸಂಖ್ಯೆಗೆ ಸಂಪರ್ಕಿಸಬಹುದು.