ಪಾಲಕ್ಕಾಡ್: ರೈಲಿನೊಳಗೆ ಮತ್ತೆ ಟಿಟಿಇ ಗೆ ಥಳಿಸಿದ ಘಟನೆ ನಡೆದಿದೆ. ಮಂಗಳೂರು-ತಿರುವನಂತಪುರಂ ಮಾವೇಲಿ ಎಕ್ಸ್ಪ್ರೆಸ್ನಲ್ಲಿ ಟಿಟಿಇ ರಾಜಸ್ಥಾನ ಮೂಲದ ವಿಕ್ರಮ್ ಕುಮನ್ ಮೀನಾ ಎಂಬುವವರಿಗೆ ಥಳಿಸಲಾಗಿದೆ.
ರೈಲು ತಿರೂರ್ ತಲುಪಿದಾಗ ಈ ಘಟನೆ ನಡೆದಿದೆ. ಟಿಟಿಇ ಮೇಲೆ ಹಲ್ಲೆ ನಡೆಸಿದ ತಿರುವನಂತಪುರ ಕರಮಾನ ನಿವಾಸಿ ಎಸ್ ಸ್ಟಾಲಿನ್ ನನ್ನು ರೈಲ್ವೆ ಪೋಲೀಸರು ಬಂಧಿಸಿದ್ದಾರೆ.
ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೂಗಿಗೆ ಪೆಟ್ಟು ಬಿದ್ದ ಮೀನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿಕೆಟ್ ಇಲ್ಲದೆ ರಿಸರ್ವೇಶನ್ ಕೋಚ್ನಲ್ಲಿ ಪ್ರಯಾಣಿಸಿದ ವ್ಯಕ್ತಿಯ ವಿಚಾರಣೆ ವೇಳೆ ಈ ಘಟನೆ ನಡೆದಿದೆ. ಪ್ರಯಾಣಿಕರು ನೋಡುತ್ತಿರುವಾಗಲೇ ಟಿಟಿಇ ಮೇಲೆ ಆಕ್ರಮಣ ನಡೆದಿದೆ. ಟಿಟಿಇ ದೂರಿನ ಮೇರೆಗೆ ಕೋಝಿಕ್ಕೋಡ್ ರೈಲ್ವೆ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಕೋಝಿಕ್ಕೋಡ್ನಿಂದ ರೈಲು ಹತ್ತಿ ಅಲ್ಲಿಂದ ಸಮಸ್ಯೆ ಉಂಟು ಮಾಡಿದ್ದ ಎಂದು ಥಳಿತಕ್ಕೊಳಗಾದ ಟಿಟಿಇ ಹೇಳುತ್ತಾರೆ. ಜನರಲ್ ಕೋಚ್ ಗೆ ತೆರಳುವಂತೆ ಹಲವು ಬಾರಿ ಮನವಿ ಮಾಡಿದರೂ ಕೇಳಲಿಲ್ಲ. ಬಳಿಕ ಆಕ್ರೋಶಗೊಂಡ ಪ್ರಯಾಣಿಕ ಟಿಟಿಇ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಕೈಯಿಂದ ಗುದ್ದಿ ನಂತರ ಉಸಿರುಗಟ್ಟಿಸಲಾಯಿತು ಎಂದು ಟಿಟಿಇ ದೂರಿನಲ್ಲಿ ಹೇಳಲಾಗಿದೆ. ಥಳಿಸಿದ ಬಳಿಕ ಟಿಟಿಇಗೆ ರಕ್ತಸ್ರಾವವಾಗಿರುವ ಚಿತ್ರಗಳೂ ಹೊರಬಿದ್ದಿವೆ.