HEALTH TIPS

ಸಿಂಗಾಪುರ ಪ್ರವಾಸ ಮೊಟಕುಗೊಳಿಸಿ ದುಬೈಗೆ ತಲುಪಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ : ಆನ್‍ಲೈನ್ ಮೂಲಕ ಸಚಿವ ಸಂಪುಟ ಸಭೆ

                  ತಿರುವನಂತಪುರಂ: ವಿದೇಶ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಿಂಗಾಪುರ ಪ್ರವಾಸ ಮೊಟಕುಗೊಳಿಸಿ ನಿನ್ನೆ ದುಬೈ ತಲುಪಿದ್ದಾರೆ. 19 ರಂದು ದುಬೈ ತಲುಪಲಿದ್ದಾರೆ ಎಂದು ಮೊದಲು ತಿಳಿಸಲಾಗಿತ್ತು.

                 ಮುಖ್ಯಮಂತ್ರಿಗಳು ನಿನ್ನೆ ಬೆಳಗ್ಗೆ ದುಬೈನಿಂದ ಆನ್‍ಲೈನ್‍ನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಂಡರು. ಇದೇ ತಿಂಗಳ 6ರಂದು ಮುಖ್ಯಮಂತ್ರಿ ಹಾಗೂ ಅವರ ಕುಟುಂಬ ಕೇರಳದಿಂದ ವಿದೇಶ ಪ್ರವಾಸಕ್ಕೆ ತೆರಳಿದ್ದರು.

            ದುಬೈಗೆ ಆಗಮಿಸಿರುವ ಮುಖ್ಯಮಂತ್ರಿ ಎರಡು ದಿನಗಳ ಕಾಲ ದುಬೈಯಲ್ಲಿರುತ್ತಾರೆ.  ಆದರೆ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಸೂಚಿಸಲಾಗಿದೆ. ಮುಖ್ಯಮಂತ್ರಿ ದುಬೈ ಗ್ರ್ಯಾಂಡ್ ಹಯಾತ್‍ನಲ್ಲಿ ನೆಲೆಸಿದ್ದಾರೆ. ಇಂದು ಬೆಳಗ್ಗೆ ಆನ್‍ಲೈನ್‍ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು. 20ರಂದು ಕೇರಳ ತಲುಪುವುದಾಗಿ ಮುಖ್ಯಮಂತ್ರಿಗಳು ಸಂಪುಟ ಸಭೆಯಲ್ಲಿ ಪ್ರಕಟಿಸಿದರು.

              ಸಿಂಗಾಪುರದಿಂದ ಸಭೆಗೆ ಹಾಜರಾಗಲಿದ್ದಾರೆ ಎಂದು ಮೊದಲೇ ತಿಳಿಸಲಾಗಿತ್ತು. 19ರಂದು ದುಬೈಗೆ ವಾಪಸಾಗಬೇಕಿತ್ತು. ಈ ದಿನಾಂಕಗಳು ಈಗ ಬದಲಾಗಿವೆ. ನಿನ್ನೆಯ ಸಚಿವ ಸಂಪುಟ ಸಭೆಯು ವಿಧಾನಸಭೆ ಅಧಿವೇಶನದ ದಿನಾಂಕದ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಮುಖ್ಯಮಂತ್ರಿ ಕೇರಳಕ್ಕೆ ಆಗಮಿಸಿದ ಬಳಿಕ ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries