HEALTH TIPS

ಸ್ವರ ಚಿನ್ನಾರಿಯಿಂದ ಐಲದಲ್ಲಿ 'ಕಾಸರಗೋಡು ಕನ್ನಡ ಹಬ್ಬ'ಕಾರ್ಯಕ್ರಮ

                    ಉಪ್ಪಳ: ಜಿಲ್ಲೆಯ ಸಾಮಾಜಿಕ, ಸಾಂಸ್ಕøಥಿಕ ಸಂಘಟನೆ'ರಂಗ ಚಿನ್ನಾರಿ ಕಾಸರಗೋಡು(ರಿ)'ನ ಸಂಗೀತ ಘಟಕ ಸ್ವರಚಿನ್ನಾರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ವತಿಯಿಂದ ಹಾಗೂ  ಉಪ್ಪಳ ತರುಣ ಕಲಾವೃಂದ ಸಹಯೋಗದೊಂದಿಗೆ ಸುಮಧುರು ಗೀತೆಗಳ ಗಾಯನ 'ಕಾಸರಗೋಡು ಕನ್ನಡ ಹಬ್ಬ'ಕಾರ್ಯಕ್ರಮ ಮೇ 26ರಂದು ಸಂಜೆ 5ರಿಂದ ಉಪ್ಪಳ ಐಲ ಶ್ರೀ ದುರ್ಗಾಪರಮೇಶ್ವರೀ ಕಲಾಭವನದಲ್ಲಿ ಜರುಗಲಿದೆ.

                ಖ್ಯಾತ ನಟ, ಸಾಃಇತಿ ಶಶಿರಾಜ್ ಕಾವೂರು ಸಮಾರಂಭ ಉದ್ಘಾಟಿಸುವರು.ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸುವರು. ಖ್ಯಾತ ನಟ ಹಾಗೂ ಗಾಯಕ ಮೈಮ್ ರಾಮ್‍ದಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ಸಂಗೀತ ಗುರು ಸುನಿತಾ ಬೈಪಡಿತ್ತಾಯ ಅವರನ್ನು ಸನ್ಮಾನಿಸಲಾಗುವುದು. ಮಜಲು ಶಂಕರನಾರಾಯಣ ಹೊಳ್ಳ, ಕೆ. ಸತೀಶ್ಚಂದ್ರ ಭಂಡಾರಿ, ಕೆ. ಸತ್ಯನಾರಾಯಣ ಪಾಲ್ಗೊಳ್ಳುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries