HEALTH TIPS

ಶಾಖದಿಂದ ಕಂಗೆಟ್ಟ ರಾಜ್ಯ: ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಡೆತ

                 ತಿರುವನಂತಪುರ: ಬಿಸಿಗಾಳಿ, ಸಮುದ್ರ ಪ್ರಕ್ಷ್ಯಬ್ದತೆಯ ಕಾರಣ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರ ಕಳಾಹೀನವಾಗಿದೆ. 

                ಹಗಲು ರಾತ್ರಿ ಒಂದೇ ಸಮನೆ ಬಿಸಿ ಏರಿಕೆಯಾಗುತ್ತಿರುವುದರಿಂದ ಪ್ರವಾಸಿಗರ ಹರಿವು ಕಡಿಮೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಬೇಸಿಗೆ ಕಾಲದಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

               ಬೆಳಗ್ಗೆಯಿಂದ ಸಂಜೆಯವರೆಗೆ ಎಲ್ಲ ಪ್ರಮುಖ ಪ್ರವಾಸಿ ಕೇಂದ್ರಗಳಿಗೆ ಬೆರಳೆಣಿಕೆಯಷ್ಟು ಜನ ಮಾತ್ರ ತಲುಪುತ್ತಾರೆ. ಸಂಜೆ ವೇಳೆ ಬೆರಳೆಣಿಕೆಯಷ್ಟೇ ಜನರು ಆಗಮಿಸುತ್ತಾರೆ. ಸಮುದ್ರ ಪ್ರಕ್ಷುಬ್ದತೆಯ ವಿದ್ಯಮಾನ ಮತ್ತು ಅನೇಕ ಆಕಸ್ಮಿಕ ಸಾವುಗಳ ಪುನರಾವರ್ತಿತ ಎಚ್ಚರಿಕೆಗಳೊಂದಿಗೆ, ಕಡಲತೀರಗಳು ಸಹ ನಿರ್ಜನವಾಗಿವೆ. 

             ಏಪ್ರಿಲ್-ಮೇ ಬೇಸಿಗೆಯ ತಿಂಗಳುಗಳಲ್ಲಿ ಸಾಮಾನ್ಯವಾಗಿ ಕೇರಳದಲ್ಲಿ ಪ್ರವಾಸೋದ್ಯಮ ಹೆಚ್ಚುತ್ತದೆ, ಆದರೆ ಈ ಬಾರಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆತಂಕವಿದೆ. ಪ್ರವಾಸಿಗರ ಸಂಖ್ಯೆ ಸತತವಾಗಿ ಕಡಿಮೆಯಾಗುತ್ತಿರುವುದರಿಂದ ಕಡಲತೀರ ಮತ್ತಿತರ ಕಡೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರ ಸ್ಥಿತಿ ಹೀನಾಯವಾಗಿ ಪರಿಣಮಿಸಿದೆ.

               ಕೇರಳದ ಜಲಪಾತಗಳಲ್ಲಿ ಕಡಿಮೆ ನೀರಿನ ಮಟ್ಟವು ಪ್ರವಾಸಿಗರನ್ನು ನಿರುತ್ಸಾಹಗೊಳಿಸಿದೆ. ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಮತ್ತು ವನ್ಯಪ್ರಾಣಿಗಳು ಸಹಿಸಲಾಗದ ಶಾಖದಿಂದ ಹೊರಬರುವ ಬೆದರಿಕೆಯೂ ಪ್ರವಾಸಿಗರನ್ನು ತಡೆಹಿಡಿದಿದೆ. ಊಟಿ, ಕೊಡೈಕೆನಾಲ್, ಮೂನ್ನಾರ್ ಮತ್ತು ಕೊಡಗಿನಂತಹ  ತಣ್ಣಗಿನ ಹವೆಯಿರುವಲ್ಲೂ ಈ ಬಾರಿ ಉಷ್ಣತೆ ಏರಿಕೆಯಾಗಿದೆ. 

             ಕೇರಳದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬರುವವರ ಸಂಖ್ಯೆ ಇಳಿಮುಖವಾಗಿರುವುದರಿಂದ ಸರ್ಕಾರಕ್ಕೆ ಶುಲ್ಕ ಮತ್ತಿತರ ವಿಷಯಗಳಲ್ಲಿ ಸಾಕಷ್ಟು ಆದಾಯವೂ ನಷ್ಟವಾಗಿದೆ. ಎಪ್ರಿಲ್‍ನಲ್ಲಿ ಚುನಾವಣೆಯ ಕಾವು ಮತ್ತು ನಂತರದ ತಕ್ಷಣದ ನಿರಂತರ ಶಾಖ ಅಲೆಯ ಎಚ್ಚರಿಕೆಗಳಿಂದ ಪ್ರವಾಸೋದ್ಯಮವು ತೀವ್ರವಾಗಿ ಹಾನಿಗೊಳಗಾಗಿದೆ. ಕಡಲತೀರಗಳಲ್ಲದೆ, ಹೆಚ್ಚು ಪ್ರವಾಸಿಗರು ಭೇಟಿ ನೀಡುವ ವಯನಾಡು ಮತ್ತು ಆಲಪ್ಪುಳ ಜಿಲ್ಲೆಗಳು ರಾತ್ರಿಯಲ್ಲೂ  ಶಾಖದಿಂದ ಕುದಿಯುತ್ತಿದೆ.  ಆದರೆ ವಾಟರ್ ಥೀಮ್ ಪಾರ್ಕ್‍ಗಳಿಗೆ ಬರುವವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ ಎನ್ನುತ್ತಾರೆ ಪ್ರವಾಸ ನಿರ್ವಾಹಕರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries