HEALTH TIPS

ರಾಜ್‌ಕೋಟ್ ಅಗ್ನಿ ದುರಂತ: ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಗುಜರಾತ್ ಹೈಕೋರ್ಟ್

         ಹಮದಾಬಾದ್‌: ರಾಜ್‌ಕೋಟ್‌ ಗೇಮ್‌ ಝೋನ್‌ ಅಗ್ನಿ ದುರಂತದ ಬಗ್ಗೆ ಕಿಡಿಕಾರಿರುವ ಗುಜರಾತ್‌ ಹೈಕೋರ್ಟ್‌ನ ವಿಶೇಷ ಪೀಠ 'ಇದು ಮಾನವನಿಂದಾದ ದುರಂತ' ಎಂದು ಹೇಳಿದೆ. ಅಲ್ಲದೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಯಾವ ನಿಬಂಧನೆ ಮೇಲೆ ಈ ಗೇಮ್ ಝೋನ್‌ ಕಾರ್ಯನಿರ್ವಹಿಸುತ್ತಿತ್ತು ಎನ್ನುವುದರ ಬಗ್ಗೆ ಮಾಹಿತಿ ಕೊಡಿ ಎಂದು ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಿದೆ.

           'ಮಾನವನಿಂದಾಗಿ ನಡೆದ ಈ ದುರಂತದಲ್ಲಿ ಮುಗ್ಧ ಮಕ್ಕಳು ಮೃತಪಟ್ಟಿದ್ದಾರೆ. ತಮ್ಮವರನ್ನು ಕಳೆದುಕೊಂಡು ಕುಟುಂಬಗಳು ದುಃಖದಲ್ಲಿವೆ' ಎಂದು ವಿಶೇಷ ಪೀಠದ ನ್ಯಾಯಾಧೀಶರಾದ ಬೈರೆನ್ ವೈಷ್ಣವ್ ಹೇಳಿದರು.

             'ಗುಜರಾತ್ ಸಮಗ್ರ ಸಾಮಾನ್ಯ ಅಭಿವೃದ್ಧಿ ನಿಯಂತ್ರಣ ನಿಯಮಗಳಲ್ಲಿನ ನ್ಯೂನತೆಗಳನ್ನು ಲಾಭ ಪಡೆದು ಗೇಮಿಂಗ್ ಝೋನ್ ಕಾರ್ಯನಿರ್ವಹಿಸುತ್ತಿತ್ತು ಎಂದು ದಿನಪತ್ರಿಕೆಗಳ ವರದಿಯಿಂದ ತಿಳಿದುಬರುತ್ತದೆ. ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅಗತ್ಯ ಅನುಮತಿಯೂ ಪಡೆದಿರಲಿಲ್ಲ' ಎಂದು ಪೀಠ ಹೇಳಿದೆ.

               ಅಗ್ನಿ ಸುರಕ್ಷತೆ, ನಿರ್ಮಾಣಕ್ಕೆ ಯಾವುದೇ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವಲ್ಲಿನ ಅಡಚಣೆಗಳನ್ನು ನಿವಾರಿಸುವ ಸಲುವಾಗಿ, ಇಂತಹ ಮನರಂಜನಾ ಚಟುವಟಿಕೆಗಳನ್ನು ನಡೆಸಲು ಮಾಲೀಕರು ತಾತ್ಕಾಲಿಕ ಕಟ್ಟಡವನ್ನು ಬಳಸುತ್ತಾರೆ ಎಂದು ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಕೋರ್ಟ್ ಹೇಳಿದೆ. ಈ ಅಗ್ನಿದುರಂತದಲ್ಲಿ 27 ಮಂದಿ ಸಾವಿಗೀಡಾಗಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries