HEALTH TIPS

ದೇವರ ಹೆಸರಲ್ಲಿ ಬಿಜೆಪಿ ಮತಯಾಚನೆ: ಪ್ರಿಯಾಂಕಾ ಗಾಂಧಿ

            ರಾಯ್‌ಬರೇಲಿ: ಹಣದುಬ್ಬರ‌ ಮತ್ತು ನಿರುದ್ಯೋಗ ಸಮಸ್ಯೆಯ ಬಗ್ಗೆ ಮಾತನಾಡುವುದನ್ನು ಬಿಟ್ಟು ಬಿಜೆಪಿಯು ದೇವರ ಹೆಸರಿನಲ್ಲಿ ಮತಯಾಚಿಸುತ್ತಿದೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶುಕ್ರವಾರ ಆರೋಪಿಸಿದರು.

           ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕಿಶೋರಿ ಲಾಲ್‌ ಶರ್ಮಾ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ತಮ್ಮ ಸರ್ಕಾರವು 10 ವರ್ಷಗಳ ಅವಧಿಯಲ್ಲಿ ಮಾಡಿರುವ ಕೆಲಸವನ್ನು 70 ವರ್ಷಗಳ ಅವಧಿಯಲ್ಲಿ ಯಾರೂ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟಿ.ವಿ. ವಾಹಿನಿಗಳಲ್ಲಿ ಹೇಳುತ್ತಿದ್ದಾರೆ.

                ಆದರೆ ನಿಜವಾಗಿಯೂ ಪರಿಸ್ಥಿತಿ ಬೇರೆಯೇ ಇದೆ' ಎಂದು ಹೇಳಿದರು.

            'ದೇವರು ಮತ್ತು ಧರ್ಮಕ್ಕೆ ನಾವೂ ಗೌರವ ನೀಡುತ್ತೇವೆ. ಆದರೆ ದೇವರ ಹೆಸರಿನಲ್ಲಿ ರಾ‌ಜಕೀಯ ಮಾಡುವುದು ತಪ್ಪು' ಎಂದರು.

                 'ನೀವು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ, 10 ವರ್ಷಗಳಲ್ಲಿ ಯಾರ ಜೀವನ ಮಟ್ಟದಲ್ಲಿ ಸುಧಾರಣೆ ಕಂಡಿದೆ? ದೊಡ್ಡ ಬಂಡವಾಳಶಾಹಿಗಳ ಸಂಪತ್ತು ವೃದ್ಧಿಸಿದೆ. ಉದ್ಯಮಿಗಳ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಆದರೆ ರೈತರ ಸಾಲ ಮನ್ನಾ ಮಾಡಲಿಲ್ಲ' ಎಂದು ಹೇಳಿದರು.

               ಜನರಿಗಾಗಿ ಕೆಲಸ ಮಾಡಲು ಕಾಂಗ್ರೆಸ್‌ ಬಯಸುತ್ತಿದೆ. ಪಕ್ಷವು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ ಎಂದರು. ಶರ್ಮಾ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಅಮೇಠಿ ಕ್ಷೇತ್ರಕ್ಕೆ ಮೇ 20ರಂದು ಮತದಾನ ನಡೆಯಲಿದೆ.

ಸಂಸ್ಕಾರವಿಲ್ಲದ ಮಾತು:

               ಕಿಶೋರಿ ಲಾಲ್‌ ಶರ್ಮಾ ಅವರನ್ನು ರಾಯ್‌ಬರೇಲಿಯ ಬಿಜೆಪಿ ಅಭ್ಯರ್ಥಿ ದಿನೇಶ್‌ ಪ್ರತಾಪ್‌ ಸಿಂಗ್‌ ಅವರು, 'ಪ್ರಿಯಾಂಕಾ ಗಾಂಧಿಯ ಗುಮಾಸ್ತ' ಎಂದು ಕರೆದಿರುವುದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ, ಆಡಳಿತಾರೂಢ ಪಕ್ಷದ ಮುಖಂಡ ಸಂಸ್ಕಾರವಿಲ್ಲದ ಮಾತುಗಳನ್ನಾಡಿದ್ದಾರೆ ಎಂದು ಟೀಕಿಸಿದರು.

              'ಶರ್ಮಾ ಅವರಿಗಿಂತ ಉತ್ತಮ ಅಭ್ಯರ್ಥಿ ಅಮೇಠಿ ಕ್ಷೇತ್ರಕ್ಕೆ ಸಿಗಲ್ಲ. 40 ವರ್ಷಗಳಿಂದ ಕ್ಷೇತ್ರಕ್ಕಾಗಿ ದುಡಿದಿರುವ ಅವರು ನಮ್ಮ ಕುಟುಂಬದವರಂತೆ ಇದ್ದಾರೆ' ಎಂದು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

              ರಾಯ್‌ಬರೇಲಿ ಮತ್ತು ಅಮೇಠಿಯಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries