HEALTH TIPS

ಉಪಚುನಾವಣೆ: ಧರ್ಮಶಾಲಾದಲ್ಲಿ ತ್ರಿಕೋನ ಸ್ಪರ್ಧೆ

          ರ್ಮಶಾಲಾ: ಹಿಮಾಚಲ ಪ್ರದೇಶದ ಧರ್ಮಶಾಲಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಕಣಕ್ಕಿಳಿಯವುದರ ಮೂಲಕ ತ್ರಿಕೋನ ಸ್ಪರ್ಧೆಗೆ ವೇದಿಕೆ ಸಿದ್ಧವಾಗಿದೆ.

           ಬಿಜೆಪಿಯು ಟಿಕೆಟ್‌ ನಿರಾಕರಿಸಿರುವುದಕ್ಕೆ ರಾಕೇಶ್‌ ಕುಮಾರ್‌ ಚೌಧರಿ ಅವರು ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದಾರೆ.

            ರಾಕೇಶ್‌ ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು ಇದೇ ಮೊದಲಲ್ಲ. ಕಾಂಗ್ರೆಸ್‌ನಲ್ಲಿದ್ದ ರಾಕೇಶ್ ಅವರು 2019 ಚುನಾವಣೆಯಲ್ಲಿ ಪಕ್ಷವು ಟಿಕೆಟ್‌ ನಿರಾಕರಿಸಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಬಳಿಕ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

            ಕಾಂಗ್ರೆಸ್‌ ತೊರೆದು ಪಕ್ಷಕ್ಕೆ ಸೇರಿದ್ದ ಸುಧೀರ್‌ ಶರ್ಮಾ ಅವರಿಗೆ ಬಿಜೆಪಿಯು ಈ ಬಾರಿ ಇಲ್ಲಿಂದ ಸ್ಪರ್ಧಿಸಲು ಟಿಕೆಟ್‌ ನೀಡಿದೆ. 2022ರ ವಿಧಾನಸಭೆ ಚುನಾಣೆಯಲ್ಲಿ ಶರ್ಮಾ ಅವರು ರಾಕೇಶ್‌ ಅವರನ್ನು ಸೋಲಿಸಿದ್ದರು.

              ನಾಮಪತ್ರ ಹಿಂಪಡೆಯಲು ನಿರಾಕರಿಸಿರುವ ಕಾರಣಕ್ಕೆ ರಾಕೇಶ್‌ ಅವರನ್ನು ಮೇ 17ರಂದು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು. ಧರ್ಮಶಾಲಾ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷವು ಮಾಜಿ ಮೇಯರ್‌ ದೇವಿಂದರ್‌ ಜಗ್ಗಿ ಅವರನ್ನು ಅಖಾಡಕ್ಕಿಳಿಸಿದೆ.

            ಕಾಂಗ್ರೆಸ್‌ನ ಆರು ಮಂದಿ ಶಾಸಕರನ್ನು ಅನರ್ಹಗೊಳಿಸಿರುವುದರಿಂದ ತೆರವಾಗಿರುವ ಧರ್ಮಶಾಲಾ, ಸುಜನ್‌ಪುರ, ಗಾಗಾರೆಟ್‌, ಲಾಹೌಲ್-ಸ್ಪಿಟಿ, ಬಂಡಸರ್‌ ಮತ್ತು ಕುಟ್‌ಲೆಹರ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.

              ಉಪಚುನಾವಣೆ ಮತ್ತು ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಮತದಾನವು ಜೂನ್‌ 1ರಂದು ನಡೆಯಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries