HEALTH TIPS

ಬೆಳ್ಳೂರು: ಬಾವಿಗೆ ಬಿದ್ದ ಕೋಳಿಯ ರಕ್ಷಿಸುವ ಮಧ್ಯೆ ಆಯತಪ್ಪಿ ಬಿದ್ದು ಯುವಕ ಮೃತ್ಯು

               ಮುಳ್ಳೇರಿಯ: ಬಾವಿಗೆ ಬಿದ್ದ ಕೋಳಿಯನ್ನು ರಕ್ಷಿಸಲು ಇಳಿದ ಯುವಕ, ಮೇಲಕ್ಕೇರುವ ಮಧ್ಯೆ ಆಯತಪ್ಪಿ ಬಿದ್ದು, ದಾರುಣವಾಗಿ ಮೃತಪಟ್ಟಿದ್ದಾರೆ. ಬೆಳ್ಳೂರು ಪಂಚಾಯಿತಿ ನೆಟ್ಟಣಿಗೆ  ಪಡ್ಡೈಮೂಲೆ ನಿವಾಸಿ ಸುಂದರ ಎಂಬವರ ಪುತ್ರ ಸತೀಶ(30)ಮೃತಪಟ್ಟವರು. ನೆಟ್ಟಣಿಗೆ ಕಲ್ಲಗ ಎಂಬಲ್ಲಿ ರವಿ ಎಂಬವರ ಮನೆ ಬಾವಿಗೆ ಬಿದ್ದ ಕೋಳಿಯನ್ನು ಮೇಲಕ್ಕೆತ್ತಲು ಸತೀಶ ಅವರು ಬಾವಿಗಿಳಿದಿದ್ದು, ಮೇಲಕ್ಕೇರುತ್ತಿದ್ದಂತೆ ಆಯತಪ್ಪಿ ಬಿದ್ದಿದ್ದಾರೆ. ತಕ್ಷಣ ಕಾಸರಗೋಡಿನಿಂದ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಸತೀಶ್ ಅವರನ್ನು ಮೇಲಕ್ಕೆತ್ತಿದರೂ ಪ್ರಯೋಜನವಾಗಿರಲಿಲ್ಲ. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries