HEALTH TIPS

ವಿದ್ಯುತ್ ವೈಫಲ್ಯ; ರೈಲು ಸಂಚಾರ ಅಸ್ತವ್ಯಸ್ತ; ಎರ್ನಾಕುಳಂನಲ್ಲಿ ಎರಡು ಗಂಟೆಗಳ ಕಾಲ ರೈಲುಗಳ ನಿಲುಗಡೆ

              ತಿರುವನಂತಪುರಂ: ವಿದ್ಯುತ್ ವ್ಯತ್ಯಯದಿಂದಾಗಿ ಆಲುವಾ ಮತ್ತು ಎರ್ನಾಕುಳಂ ಉತ್ತರ ನಿಲ್ದಾಣದ ನಡುವೆ ರೈಲು ಸಂಚಾರ ನಿಲುಗಡೆಗೊಂಡ ವಿದ್ಯಮಾನ ನಿನ್ನೆ ರಾತ್ರಿ ನಡೆದಿದೆ. 

                ಗಂಟೆಗಟ್ಟಲೆ ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು. ಎರಡು ಗಂಟೆಗೂ ಹೆಚ್ಚು ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು.

               ಕೋಝಿಕ್ಕೋಡ್‍ಗೆ ತೆರಳುತ್ತಿದ್ದ ರೈಲುಗಳು ತಡೆಹಿಡಿಯಲ್ಪಟ್ಟವು. ತಿರುವನಂತಪುರಂ - ಕಣ್ಣೂರು ಜನಶತಾಬ್ದಿ ಮತ್ತು ನಿಲಂಬೂರ್ - ಕೊಟ್ಟಾಯಂ ಪ್ಯಾಸೆಂಜರ್ ರೈಲು ಸಂಚಾರ ಮೊಟಕುಗೊಂಡಿತು. ವಿದ್ಯುತ್ ವ್ಯತ್ಯಯ ಪರಿಹಾರಕ್ಕೆ ಪ್ರಯತ್ನ ಮುಂದುವರಿದಿದೆ. ವಿದ್ಯುತ್ ವೈಫಲ್ಯವನ್ನು ಪರಿಹರಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

          ಎರ್ನಾಕುಳಂ ಪ್ರದೇಶದಲ್ಲಿ ನಿನ್ನೆ ಸಂಜೆ ಧಾರಾಕಾರ ಮಳೆಯಾಗಿದೆ. ಮಳೆಯಿಂದಾಗಿ ಹಳಿ ಒಂದರಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮರ ಬಿದ್ದಿರುವುದೇ ಕಾರಣ ಎಂಬ ಮಾಹಿತಿಯೂ ಇದೆ. ಉತ್ತರ ರೈಲು ನಿಲ್ದಾಣದಲ್ಲಿ ಸಿಲುಕಿದ್ದ ಜನಶತಾಬ್ದಿ ಬಳಿಕ ತಡವಾಗಿ ಸಂಚಾರ ನಡೆಸಿತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries