HEALTH TIPS

ವರ್ಕಾಡಿಯ ಯುವಕನ ಮೃತದೇಹ ಮೂಡಬಿದಿರೆಯ ಹೋಮ್‍ಸ್ಟೇ ಈಜುಕೊಳದಲ್ಲಿ ಪತ್ತೆ

                 ವರ್ಕಾಡಿ ಬೇಕರಿ ಜಂಕ್ಷನ್ ನಿವಾಸಿ ಕೃಷ್ಣ ಮೂಲ್ಯ ಎಂಬವರ ಪುತ್ರ ಪುನೀತ್(29)ಎಂಬವರು ಮೂಡಬಿದಿರೆ ಸನಿಹದ ಹೋಮ್‍ಸ್ಟೇ ಒಂದರ ಈಜುಕೊಳದಲ್ಲಿ ಡೈವ್ ನಡೆಸುವ ಮಧ್ಯೆ ಹಣೆಯ ಭಾಗಕ್ಕೆ ಉಂಟದ ಗಾಯದಿಂದ ಯುವಕ ಮೃತಪಟ್ಟ ಘಟನೆ ನಡೆದಿದೆ. ವರ್ಕಾಡಿ ಬೇಮೃತಪಟ್ಟ ಯುವಕ.

             ಪುನೀತ್ ತನ್ನ ಇಬ್ಬರು ಸಹೋದರರು ಹಾಗೂ ಸಂಬಂಧಿಕರು ಸೇರಿದಂತೆ ಒಂಬತ್ತು ಮಂದಿಯ ತಂಡದೊಂದಿಗೆ ಹೊಸಬೆಟ್ಟು ಗ್ರಾಪಂ ವ್ಯಾಪ್ತಿಯ ಬೊಗ್ರುಗುಡ್ಡೆ ಸನಿಹದ ಹೋಮ್‍ಸ್ಟೇಗೆ ಭಾನುವಾರ ತೆರಳಿದ್ದರು. ಅಲ್ಲಿನ ಈಜುಕೊಳದಲ್ಲಿ ಪುನೀತ್ ಡೈವ್ ನಡೆಸುತ್ತಿದ್ದು, ಬಹಳ ಹೊತ್ತಿನ ವರೆಗೂ ಕೊಠಡಿಗೆ ಬಾರದಿರುವುದರಿಂದ ಅತ್ತ ತೆರಳಿ ನೋಡಿದಾಗ ಪುನೀತ್ ನೀರಲ್ಲಿ ಅಬೋಧಾವಸ್ಥೆಯಲ್ಲಿ ಬಿದ್ದಿದ್ದರು. ತಕ್ಷಣ ಇವರನ್ನು ಮೇಲಕ್ಕೆತ್ತಿ ಸನಿಹದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಡೈವ್ ಹೊಡೆಯುವ ಮಧ್ಯೆ ಹಣೆಯ ಭಾಗಕ್ಕೆ ಗಾಯವುಂಟಾಗಿ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ಮೇಸ್ತ್ರಿ ಕೆಲಸ ನಡೆಸುತ್ತಿದ್ದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries