ಕುಂಬಳೆ: ಎರಡು ದಶಕಗಳಿಗೂ ಹೆಚ್ಚು ಕಾಲ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಅಬ್ದುಲ್ಲ ಕುಂಬಳೆ ಅವರ ಚಿಕಿತ್ಸೆಗೆ ಹಣ ಸಂಗ್ರಹಿಸಲು ಅಬ್ದುಲ್ಲ ಕುಂಬಳೆ ಚಿಕಿತ್ಸಾ ಪರಿಹಾರ ನಿಧಿಯನ್ನು ರಚಿಸಲಾಗಿದೆ.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್, ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಸೈಯದ್ ಮುನೀರುಲ್ ಅಹ್ದಲ್ ತಂಙಳ್, ಕುಂಬಳೆ ಪ್ರೆಸ್ ಫೆÇೀರಂ ಮಾಜಿ ಅಧ್ಯಕ್ಷ ಸುರೇಂದ್ರನ್ ಚೀಮೇನಿ ಮೊದಲಾದವರ ನೇತೃತ್ವದಲ್ಲಿ ಅಬ್ದುಲ್ಲ ಕುಂಬಳೆ ಸಹಾಯನಿಧಿ ರಚಿಸಲಾಯಿತು.
ಎರಡೂ ಕಿಡ್ನಿಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ತುರ್ತು ಕಿಡ್ನಿ ಕಸಿ ಮಾಡುವಂತೆ ವೈದ್ಯರು ಸೂಚಿಸಿದ್ದು ಈ ಹಿನ್ನೆಲೆಯಲ್ಲಿ ಕುಂಬಳೆ ಪ್ರೆಸ್ ಪೋರಂನಲ್ಲಿ ನಡೆದ ಸಭೆಯಲ್ಲಿ ಪರಿಹಾರ ನಿಧಿ ಸಮಿತಿ ರಚಿಸಲಾಗಿದೆ.
ಶಾಸಕ ಎ.ಕೆ.ಎಂ.ಅಶ್ರಫ್ ಸಭೆಯನ್ನು ಉದ್ಘಾಟಿಸಿದರು. ಮಾಸ್ತರ್ ಕೆ.ಎಂ.ಎ ಸತ್ತಾರ್ ವಿಷಯ ಮಂಡಿಸಿದರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್, ಅಶ್ರಫ್ ಬಡಾಜೆ, ಬಿ.ಎನ್. ಮುಹಮ್ಮದ್ ಅಲಿ, ಅಹ್ಮದ್ ಅಲಿ, ಅಬ್ದುಲ್ಲ ತಾಜ್, ಮಮ್ಮು ಮುಬಾರಕ್ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯ ಪೋಷಕರಾಗಿ ಸೈಯದ್ ಮುನೀರುಲ್ ಅಹ್ದಲ್, ಅಧ್ಯಕ್ಷರಾಗಿ ಶಾಸಕ ಎ.ಕೆ.ಎಂ.ಅಶ್ರಫ್, ಕಾರ್ಯಾಧ್ಯಕ್ಷರಾಗಿ ಅಶ್ರಫ್ ಕಾರ್ಲೆ, ಸಂಚಾಲಕರಾಗಿ ಸುರೇಂದ್ರನ್ ಮಾಸ್ತರ್ ಚಿಮೇನಿ, ಖಜಾಂಚಿಯಾಗಿ ಕುಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಯು.ಪಿ.ತಾಹಿರಾ ಯೂಸುಫ್ ಆಯ್ಕೆಮಾಡಲಾಯಿತು.
ಶೀಘ್ರವಾಗಿ ಸೂಕ್ತ ಕಿಡ್ನಿ ಕಸಿ ಮಾಡಿ ಅಬ್ದುಲ್ಲ ಅವರನ್ನು ಸಹಜ ಜೀವನಕ್ಕೆ ತರುವುದು ಈ ಸಂಘದ ಗುರಿಯಾಗಿದೆ ಎಂದು ಮುಖಂಡರು ತಿಳಿಸಿದರು.