HEALTH TIPS

ಬಾಲಕಿಗೆ ಕಿರುಕುಳ ನೀಡಿದ ಘಟನೆ: ಆರೋಪಿಯನ್ನು ಸಾಕ್ಷ್ಯಕ್ಕೆ ಹಾಜರುಪಡಿಸಿದಾಗ ಹಿಂಸಾಚಾರಕ್ಕೆ ತಿರುಗಿದ ಸ್ಥಳೀಯರು

          ಕಾಸರಗೋಡು: ಕಾಞಂಗಾಡ್‍ನ ಪಡನ್ನಕ್ಕಾಡ್‍ನ 10 ವರ್ಷದ ಬಾಲಕಿಯನ್ನು ಅಪಹರಿಸಿ ಕಿರುಕುಳ ನೀಡಿ ಚಿನ್ನಾಭರಣ ದೋಚಿದ್ದ ಪ್ರಕರಣದ ಆರೋಪಿಯನ್ನು ಸಾಕ್ಷ್ಯಕ್ಕಾಗಿ ಕರೆತಂದಾಗ ನಾಟಕೀಯ ಘಟನೆಗಳಿಗೆ ಸಾಕ್ಷಿಯಾಯಿತು. 

            ಆರೋಪಿ ಪಿಎ ಸಲೀಂನನ್ನು ಸಾಕ್ಷ್ಯ ಸಂಗ್ರಹಕ್ಕಾಗಿ ಬಾಲಕಿಯ ಮನೆ ಬಳಿ ಕರೆತರಲಾಗಿತ್ತು. ಸುತ್ತಮುತ್ತ ಜಮಾಯಿಸಿದ ಸ್ಥಳೀಯರು ಆರೋಪಿ ಸಲೀಂನನ್ನು ನೋಡಿ ಹಿಂಸಾಚಾರಕ್ಕಿಳಿದರು.  ಮುಖವಾಡ ಧರಿಸಿ ಸಲೀಂನನ್ನು ಸಾಕ್ಷ್ಯಕ್ಕಾಗಿ ಕರೆತರಲಾಗಿತ್ತು. ಮಾಸ್ಕ್ ತೆಗೆಯಬೇಕು ಎಂದು ಸ್ಥಳೀಯರು ಕೂಗಾಡಿದರು.

         ಆರೋಪಿ ಕರೆತರುತ್ತಿರುವ ವಿಷಯ ತಿಳಿದು ಜನಸಾಗರವೇ ಇಲ್ಲಿ ನೆರೆದಿತ್ತು. ಬಹಳ ಪ್ರಯಾಸದೊಂದಿಗೆ ತನಿಖಾ ತಂಡ ಆರೋಪಿಯಿಂದ ಸಾಕ್ಷ್ಯ ಸಂಗ್ರಹಿಸಿ ಮರಳಿತು. ಈಲ್ಲೆಯನ್ನೇ ಬೆಚ್ಚಿ ಬೀಳಿಸಿದ ಕಿರುಕುಳ ನಡೆದ ಐದನೇ ದಿನಕ್ಕೆ ಆರೋಪಿ ಸಲೀಂನ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಸಿಕ್ಕಿತ್ತು. ಈತ ಹಲವು ವರ್ಷಗಳಿಂದ ಕಾಞಂಗಾಡಿನ ಬಾಲಕಿಯ ಮನೆಯ ಬಳಿ ಖಾಯಂ ನಿವಾಸಿಯಾಗಿದ್ದ.

        15ರಂದು ನಡೆದ ಘಟನೆ ಬಳಿಕ ಆರೋಪಿ  ಮನೆಯಿಂದ ಹೊರ ಹೋಗಿರುವುದು ತನಿಖಾ ತಂಡದ ಅನುಮಾನವನ್ನು ಬಲಗೊಳಿಸಿದೆ. ವಿವರವಾದ ತನಿಖೆಯ ನಂತರ, ಪೋಲೀಸರು ಶಂಕಿತ ವ್ಯಕ್ತಿಯೇ ಎಂಬ ತೀರ್ಮಾನಕ್ಕೆ ಬಂದರು. ತನಿಖಾ ತಂಡಕ್ಕೆ ಹೆಚ್ಚಿನ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಆರೋಪಿಯ ಮುಖ ಸ್ಪಷ್ಟವಾದ ಸಾಕ್ಷ್ಯಗಳು ಸಿಕ್ಕಿವೆ. ಎರಡು ವರ್ಷಗಳ ಹಿಂದೆ ಮೇಲ್ಪರಂಬ ಠಾಣೆಯಲ್ಲಿ ದಾಖಲಾದ ಮತ್ತೊಂದು ಪೆÇೀಕ್ಸೊ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಕೊಡಕಿಲ್ ನೆಕ್ಲೇಸ್ ಕಳವು ಪ್ರಕರಣದಲ್ಲೂ ಈತನ ವಿರುದ್ಧ ಪ್ರಕರಣವಿದೆ.

            ಕಳೆದ ಬುಧವಾರ(ಮೇ.15) ಮನೆಯೊಳಗೆ ಮಲಗಿದ್ದ 10 ವರ್ಷದ ಬಾಲಕಿಯನ್ನು ಅಪಹರಿಸಿ ಕಿರುಕುಳ ನೀಡಿ ಚಿನ್ನಾಭರಣ ದೋಚಿ ಮನೆ ಸಮೀಪದ ಹೊಲದಲ್ಲಿ ಬಿಟ್ಟು ಹೋಗಿದ್ದ. ಕಳ್ಳತನವೇ ಕಾರಣವಾಗಿದ್ದು, ಗಲಾಟೆ ಮಾಡುತ್ತಾರೆ ಎಂಬ ಭಯದಿಂದ ಬಾಲಕಿಯನ್ನು ಅಪಹರಿಸಲಾಗಿದೆ ಎಂದು ಸಲೀಂ ಹೇಳುತ್ತಾನೆ. ಬಳಿಕ ಲೈಂಗಿಕ ದೌರ್ಜನ್ಯ ಎಸಗಿದ್ದ. ಸಲೀಂ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿದ್ದಾನೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries