HEALTH TIPS

ಕೆಪಿಸಿಸಿ ಸದಸ್ಯ ಕೆವಿ ಸುಬ್ರಮಣಿಯನ್ ರನ್ನು ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದ ಕಾಂಗ್ರೆಸ್

                ಕೋಝಿಕ್ಕೋಡ್: ಕೆಪಿಸಿಸಿ ಸದಸ್ಯ ಕೆ.ವಿ.ಸುಬ್ರಮಣಿಯನ್ ಅವರನ್ನು ಸಂಘಟನಾ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ.

                 ಇದೇ ವೇಳೆ ಕೆ.ವಿ.ಸುಬ್ರಮಣಿಯನ್ ಅವರ ವಿರುದ್ಧದ ಕ್ರಮ ಷಡ್ಯಂತ್ರವಾಗಿದ್ದು, ಕೆಪಿಸಿಸಿ ಅಧ್ಯಕ್ಷರ ನಿರ್ಧಾರ ಕೆಲವರ ಹಿತಾಸಕ್ತಿಗೆ ಮಣಿದಿದೆ ಎಂದಿರುವÀರು.

                   ಲೋಕಸಭೆ ಚುನಾವಣೆ ವೇಳೆ ಕೋಝಿಕ್ಕೋಡ್‍ನಲ್ಲಿ ಯುಡಿಎಫ್ ಅಭ್ಯರ್ಥಿ ಎಂಕೆ ರಾಘವನ್ ವಿರುದ್ಧ ಕೆವಿ ಸುಬ್ರಮಣಿಯನ್ ಕೆಲಸ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಚುನಾವಣಾ ಚಟುವಟಿಕೆಗಳ ಮೌಲ್ಯಮಾಪನಕ್ಕಾಗಿ ನಡೆದ ಕೆಪಿಸಿಸಿ ನಾಯಕತ್ವ ಸಭೆಯಲ್ಲಿ ಸುಬ್ರಮಣಿಯನ್ ವಿರುದ್ಧ ಎಂ.ಕೆ.ರಾಘವನ್ ದೂರು ನೀಡಿದ್ದರು. ಈ ವೇಳೆ ಡಿಸಿಸಿ ಸಲ್ಲಿಸಿರುವ ವರದಿ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.

                  ಈ ಹಿಂದೆ ಕ್ರಮ ಕೈಗೊಂಡಿದ್ದ ಚೆವಾಯೂರ್ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಪ್ರಶಾಂತ್ ಜೊತೆ ಸುಬ್ರಮಣಿಯನ್ ಸುದ್ದಿಗೋಷ್ಠಿ ನಡೆಸಿ ಗಂಭೀರ ಶಿಸ್ತು ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ. ಚುನಾವಣಾ ಪ್ರಚಾರದ ವೇಳೆ ಕೆ.ವಿ.ಸುಬ್ರಮಣಿಯನ್ ಅವರು ಪತ್ರಿಕಾಗೋಷ್ಠಿ ಕರೆದು ರಾಜೀನಾಮೆ ನೀಡಿರುವುದನ್ನು ನಾಯಕತ್ವವೂ ಅಂಗೀಕರಿಸಿದೆ.

                  ಆದರೆ ಕೆ.ವಿ.ಸುಬ್ರಮಣಿಯನ್ ಅವರ ವಿರುದ್ಧದ ಕ್ರಮ ಕೆಪಿಸಿಸಿ ಅಧ್ಯಕ್ಷರು ಮತ್ತು ಕೋಝಿಕ್ಕೋಡ್ ಡಿಸಿಸಿ ಅಧ್ಯಕ್ಷರ ಪಿತೂರಿ ಎಂದು ಕಿಡಿಕಾರಿದ್ದಾರೆ. ನಾಯಕರ ವಿರುದ್ಧ ಕಟು ಭಾμÉಯಲ್ಲಿ ಟೀಕೆ ಮಾಡಿದರು.

                ಕೆವಿ ಸುಬ್ರಮಣಿಯನ್ ಅವರು ಕಾಂಗ್ರೆಸ್ ನಿಯಂತ್ರಿತ ಚೇವಾಯೂರ್ ಸೇವಾ ಸಹಕಾರಿ ಬ್ಯಾಂಕ್‍ನ ಮಾಜಿ ನಿರ್ದೇಶಕರು. ಬಹಳ ದಿನಗಳಿಂದ ಬ್ಯಾಂಕ್ ಆಡಳಿತ ಸಮಿತಿ ಹಾಗೂ ಕಾಂಗ್ರೆಸ್ ನಾಯಕತ್ವದಲ್ಲಿ ಹೊಂದಾಣಿಕೆ ಇರಲಿಲ್ಲ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries