HEALTH TIPS

ಚಾಪಾಡಿ ಶ್ರೀ ಶಾರದಾ ಮೂಕಾಂಬಿಕಾ ಭಜನಾ ಮಂದಿರದ ಪ್ರಥಮ ಪ್ರತಿಷ್ಠಾ ಮಹೋತ್ಸವ

                ಬದಿಯಡ್ಕ: ಎಡನೀರು ಚಾಪಾಡಿ ಶ್ರೀ ಶಾರದಾ ಮೂಕಾಂಬಿಕಾ ಭಜನಾ ಮಂದಿರದ ಪ್ರಥಮ ಪ್ರತಿಷ್ಠಾ ಮಹೋತ್ಸವ ಮೇ 3 ರಂದು ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಕೃಪಾಶೀರ್ವಾದಗಳೊಂದಿಗೆ ತಂತ್ರಿವರ್ಯರಾದ ಬ್ರಹ್ಮಶ್ರೀ ರಾಮ ಭಟ್ ನೀರ್ಚಾಲು ಅವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. 

             ಬೆಳಗ್ಗೆ 6.30 ಕ್ಕೆ ನಡೆ ತೆರೆಯುವುದು, 8.30 ಕ್ಕೆ ಗಣಪತಿ ಹವನ, 9.30 ಕ್ಕೆ ಶ್ರೀ ಶಾರದಾ ಮೂಕಾಂಬಿಕಾ ಸೇವಾ ಸಮಿತಿಯಿಂದ ಭಜನೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ವಿವಿಧ ಭಜನಾ ತಂಡಗಳ ಭಜನೆ ಸೇವೆ, 1 ಕ್ಕೆ ಅನ್ನ ಪ್ರಸಾದ ವಿತರಣೆ, ಸಂಜೆ 6 ಕ್ಕೆ ದೀಪಾರಾಧನೆ, ರಾತ್ರಿ 8.30 ಕ್ಕೆ ಅನ್ನ ಪ್ರಸಾದ ವಿತರಣೆ, 12 ಕ್ಕೆ ಮಹಾಪೂಜೆ, ಮಂಗಳಾಚರಣೆ, ಪ್ರಸಾದ ವಿತರಣೆ ನಡೆಯಲಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries