ಬದಿಯಡ್ಕ: ನೀರ್ಚಾಲು ಕನ್ನೆಪ್ಪಾಡಿಯಲ್ಲಿರುವ ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿಯ ಪುನರ್ ಪ್ರತಿಷ್ಠಾ ಮಹೋತ್ಸವಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ನೀರ್ಚಾಲು ಕುಮಾರ ಸ್ವಾಮಿ ಭಜನಾ ಮಂದಿರದ ಪರಿಸರದಿಂದ ಹೊರಟ ಮೆರವಣಿಗೆಯ ಮುಂಚಿತ ಮಂದಿರದ ಅರ್ಚಕ ಸುಬ್ರಹ್ಮಣ್ಯ ಆಚಾರ್ಯ ವಿಶೇಷ ಪ್ರಾರ್ಥನೆಗೈದರು.
ಬಳಿಕ ಶ್ರೀಧರ್ಮಶಾಸ್ತಾ ಭಜನಾ ಮಂದಿರಕ್ಕೆ ತಲುಪಿ ಅಲ್ಲಿಂದ ಮೆರವಣಿಗೆ ಮೂಲಕ ಭಂಡಾರ ಸಮೇತ ಸಾನಿಧ್ಯಕ್ಕೆ ಕರೆ ತರಲಾಯಿತು. ಚಾವಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಐ ಲಕ್ಷ್ಮಣ ಪೆರಿಯಡ್ಕ, ಹೊರೆ ಕಾಣಿಕೆ ಸಮಿತಿಯ ಬಾಲಕೃಷ್ಣ ನಾಯ್ಕ್ ನೀರ್ಚಾಲು,ಶಂಕರ ಮಾಡತ್ತಡ್ಕ, ಹಿರಿಯ ಕವಿ ರಾಧಾಕೃಷ್ಣ ಉಳಿಯತ್ತಡ್ಕ, ರಾಮ ಪಟ್ಟಾಜೆ, ಕೃಷ್ಣ ದರ್ಬೆತ್ತಡ್ಕ,ಸುಂದರ ಬಾರಡ್ಕ, ಉದಯ ಕುಮಾರ್ ಎಂ, ಕೆ.ಕೆ.ಸ್ವಾಮಿಕೃಪಾ, ಕಿಶೋರ್ ಕುಮಾರ್, ಗಣೇಶ್ ಚೋಯಿಮೂಲೆ, ಸತೀಶ ಅಣೆಬೈಲು ಮೊದಲಾದವರು ಮೆರವಣಿಗೆಗೆ ನೇತೃತ್ವ ನೀಡಿದರು. ಬಳಿಕ ಡಾ.ಸುಬ್ರಹ್ಮಣ್ಯ ಖಂಡಿಗೆ ಉಗ್ರಾಣ ಮುಹೂರ್ತ ನೆರವೇರಿಸಿದರು. ಸಿ.ಐ ಬಾಲಕೃಷ್ಣ ಸೂರಂಬೈಲು, ಶಂಕರ ಸ್ವಾಮಿಕೃಪಾ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಧೂರು ಶ್ರೀಮದರು ಮಹಾಮಾತೆ ಭಜನಾ ಸಂಘ, ಶ್ರೀಕೃಷ್ಣ ಭಜನಾ ಸಂಘ ಮವ್ವಾರು, ರಾಗ ಮಾಲಿಕ ನೆಲ್ಲಿಕಟ್ಟೆ, ಪೂಮಾಣಿ ಕಿನ್ನಿಮಾಣಿ ಮಹಿಳಾ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆ ನಡೆಯಿತು. ಸಂಜೆ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಮಹೇಶ್ ಶಾಂತಿ ಹೆಜಮಾಡಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ವಿವಿಧ ತಾಂತ್ರಿಕ ವೈದಿಕ ವಿಧಿವಿಧಾನಗಳು ಜರಗಿತು.