HEALTH TIPS

ತನಿಖಾ ಸಂಸ್ಥೆಗಳ ಮೇಲೆ ಪ್ರಧಾನಿ ಮೋದಿ ಪ್ರಭಾವ ದೃಢ: ಕಪಿಲ್ ಸಿಬಲ್

           ವದೆಹಲಿ: ಚುನಾವಣೆ ಮುಗಿದ ನಂತರ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಅವರನ್ನು ಜೈಲಿಗೆ ಕಳಿಸಲಾಗುತ್ತದೆ ಎನ್ನುವ ಪ್ರಧಾನಿ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ತನಿಖಾ ಸಂಸ್ಥೆಗಳು ಅವರ ಅಪ್ಪಣೆಯ ಮೇರೆಗೆ ಕೆಲಸ ನಿರ್ವಹಿಸುತ್ತವೆ ಎನ್ನುವುದನ್ನು ಪ್ರಧಾನಿ ಒಪ್ಪಿಕೊಂಡಂತಾಗಿದೆ ಎಂದು ಭಾನುವಾರ ಆರೋಪಿಸಿದರು.

          ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಕಪಿಲ್ ಸಿಬಲ್, 'ಅವರು ತೇಜಸ್ವಿ ಅವರನ್ನು ಜೈಲಿಗೆ ಕಳಿಸಲು ಹೇಗೆ ಸಾಧ್ಯ? ಅದರ ಅರ್ಥ ಅವರ ನಿರ್ದೇಶನದಂತೆ ಕಾನೂನು ಕೆಲಸ ಮಾಡುತ್ತಿದೆ. ತನಿಖಾ ಸಂಸ್ಥೆಗಳು ಅವರ ಅಪ್ಪಣೆಯಂತೆ ಕೆಲಸ ಮಾಡುತ್ತಿವೆ ಎಂದು ನಾನು ಹೇಳುತ್ತಲೇ ಇದ್ದೇನೆ. ಇದು ತಪ್ಪೊಪ್ಪಿಗೆ. ನಮ್ಮ ಪ್ರಜಾಪ್ರಭುತ್ವ ಪ್ರಕ್ರಿಯೆ ಯಾವ ಮಟ್ಟಕ್ಕೆ ಕುಸಿದಿದೆ' ಎಂದು ತಿಳಿಸಿದರು.

            'ಪ್ರಧಾನಿ ತಮ್ಮ ಭಾಷಣಗಳಲ್ಲಿ 'ಇಂಡಿಯಾ' ಕೂಟವು ನಿಮ್ಮ ನಲ್ಲಿ, ವಿದ್ಯುತ್, ಬ್ಯಾಂಕ್ ಖಾತೆಯಲ್ಲಿನ ಹಣ ಕಿತ್ತುಕೊಳ್ಳುತ್ತೆ ಎಂದು ಹೇಳಿದ್ದಾರೆ ಮತ್ತು ಈಗ 'ಇಂಡಿಯಾ' ಕೂಟವು ಮುಜ್ರಾ ಮಾಡುತ್ತಿದೆ ಎಂದಿದ್ದಾರೆ. ಅವರು ಪ್ರಧಾನಿ ಪದವಿಯ ಘನತೆಯನ್ನು ಕುಗ್ಗಿಸಿದ್ದಾರೆ' ಎಂದು ಹೇಳಿದ್ದಾರೆ.

           'ನೀವು ಏನು ಹೇಳಲು ಹೊರಟಿದ್ದೀರಿ. ನೀವು ಮಹಿಳೆಯರನ್ನು ಅವಮಾನಿಸುತ್ತಿದ್ದೀರಿ, ವಿರೋಧ ಪಕ್ಷಗಳ ನಾಯಕರನ್ನು ಅವಮಾನಿಸುತ್ತಿದ್ದೀರಿ. ದ್ವೇಷ ಸಂಸ್ಕೃತಿಯನ್ನು ನಿರ್ಮಿಸಲು ಹೊರಟಿದ್ದೀರಿ. ನೀವು ಹೀಗೆ ವಿಕಸಿತ ಭಾರತವನ್ನು ಕಟ್ಟಲು ಸಾಧ್ಯವಿಲ್ಲ' ಎಂದು ಟೀಕಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries