ಕಾಸರಗೋಡು: ಕೇರಳದ 'ಡಯಟ್'ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಮತ್ತು ಶಿಕ್ಷಕರಿಗೆ ವೇತನ ವಿತರಿಸುವಂತೆ ಆಗ್ರಹಿಸಿ ಕೇರಳ ಎನ್ಜಿಒ ಸಂಘ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಸಿವಿಲ್ ಸಟೇಶನ್ ವಠಾರದಲ್ಲಿ ಪ್ರತಿಭಟನಾ ಧರಣಿ ನಡೆಯಿತು.
ಎನ್ಜಿಒ ಸಂಘದ ರಾಜ್ಯ ಕಾರ್ಯದರ್ಶಿ ಶ್ರೀ ವಿಜಯನ್ ಸಿ ಧರಣಿ ಉದ್ಘಾಟಿಸಿ ಮಾತನಾಡಿ, 'ಡಯಟ್'ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಮತ್ತು ಶಿಕ್ಷಕರಿಗೆ ವೇತನನಿರಾಕರಿಸುತ್ತಿರುವ ಸರ್ಕಾರದ ಧೋರಣೆ ಖಂಡನೀಯ. ಡಯಟ್ನಲ್ಲಿ ಬೋಧನೆ ನಡೆಸುವವರು ಹಾಗೂ ಇತರ ಕರ್ತವ್ಯ ನಿರ್ವಹಿಸುವ ಸಿಬ್ಬದಿಗೆ ತಕ್ಷಣ ವೇತನ ನೀಡಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ರಂಜಿತ್ ಕೆ ಅಧ್ಯಕ್ಷತೆ ವಹಿಸಿದ್ದರು. ಪಿ.ಪೀತಾಂಬರನ್, ಶ್ಯಾಮ್ ಪ್ರಸಾದ್ ವಿ, ಸಂತೋಷನ್ ವಿ.ಕೆ, ರವೀಂದ್ರನ್ ಕೊಟ್ಟೋಡಿ, ತುಳಸಿಧರನ್, ವರದನ್ ಮಾಡಮನ, ಸತೀಶ್ ಸಾಲಿಯಾನ್, ವಿಶಾಲಾಕ್ಷನ್, ವಿಶ್ವನಾಥ ನಾಯ್ಕ್, ಜೆನಿತ್ ಕುಮಾರ್, ಹರಿಪ್ರಸಾದ್, ಸಚಿನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.