ಕಾಸರಗೋಡು : ಲೋಕಸಭಾ ಕ್ಷೇತ್ರ ಕ್ಷೇತ್ರ ಕೆ. ಇಂಪಾಶೇಖರನ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಚುನಾವಣಾಧಿಕಾರಿಗಳ ಸಭೆಯಲ್ಲಿ ಮತ ಎಣಿಕೆ ಸಿದ್ಧತೆ ಕುರಿತು ಅವಲೋಕನ ನಡೆಸಲಾಯಿತು. ಜೂನ್ 4ರಂದು ಪೆರಿಯಾ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಮತ ಎಣಿಕೆಗೆ ಚುನಾವಣಾ ಆಯೋಗ ಸಿದ್ಧತೆ ನಡೆಸಿದ್ದು, ಮಾರ್ಗಸೂಚಿಯಂತೆ ಸಭೆ ನಡೆಸಲಾಗುತ್ತಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳಾದ ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್ ತಿಳಿಸಿದರು.
ಜಗಿಪೆÇೀಲ್, ಪಿ.ಬಿನುಮೋನ್, ನಿರ್ಮಲರೀತಾ ಗೋಮ್ಸ್, ಪಿ.ಶಾಜು ಸಿರೋಶ್ ಪಿ. ಜಾನ್ ಕೆ. ಅಜಿತ್ ಕುಮಾರ್ ಚುನಾವಣಾ ಅಪರ ಜಿಲ್ಲಾಧಿಕಾರಿ ಪಿ. ಅಖಿಲ ಎಡಿಎಂ ಕೆ.ವಿ. ಶೃತಿ ನೋಡಲ್ ಅಧಿಕಾರಿಗಳು ತಹಸೀಲ್ದಾರ್ ಚುನಾವಣಾ ವಿಭಾಗಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಪೆÇೀಸ್ಟಲ್ ಬ್ಯಾಲೆಟ್, ಎಆರ್ಒ ಮೈಕ್ರೋ ಅಬ್ಸರ್ವರ್ ಎಣಿಕೆ ಮೇಲ್ವಿಚಾರಕ ಎಣಿಕೆ ಸಹಾಯಕರಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.