HEALTH TIPS

ಕಾಸರಗೋಡು ಸಿವಿಲ್‍ಸ್ಟೇಶನ್ ವಠಾರದಲ್ಲಿ ಮಳೆಗಾಲ ಪೂರ್ವ ಶುಚೀಕರಣ

           ಕಾಸರಗೋಡು: ಜಿಲ್ಲಾಡಳಿತ ವ್ಯವಸ್ಥೆ, ನವಕೇರಳ ಕ್ರಿಯ ಯೋಜನೆ ಹಾಗೂ ಶುಚಿತ್ವ ಮಿಷನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಮುಂಗಾರು ಪೂರ್ವಭಾವಿಯಾಗಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. 

          ಕಸ ಮುಕ್ತ ಕೇರಳ ಕಾರ್ಯಕ್ರಮದ ಅಂಗವಾಗಿ ಸಿವಿಲ್ ಸ್ಟೇಶನ್ ವಠಾರದಲ್ಲಿ ಹಮ್ಮಿಕೊಂಡಿದ್ದ ಮುಂಗಾರು ಪೂರ್ವ ಸ್ವಚ್ಛತಾ ಅಭಿಯಾನವನ್ನು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಉದ್ಘಾಟಿಸಿದರು.  ಸ್ವಚ್ಛತಾ ಮಿಷನ್ ಜಿಲ್ಲಾ ಸಂಯೋಜಕ ಎಂ. ಲಕ್ಷ್ಮಿ, ಜಿಲ್ಲಾ ವಾರ್ತಾ ಅಧಿಕಾರಿ ಎಂ. ಮಧುಸೂದನನ್, ಅಬ್ದುರಹಮಾನ್ ಧನಿಯಾವಾದ್, ಹಸಿರು ಕ್ರಿಯಾ ಸೇನೆಯ ಸದಸ್ಯರುಪಲ್ಗೊಂಡಿದ್ದರು.  ವಿವಿಧ ಜಿಲ್ಲಾಸ್ಪತ್ರೆ ಆವರಣ ಹಾಗೂ ಕಚೇರಿಯನ್ನು ಸ್ವಚ್ಛಗೊಳಿಸಲಾಯಿತು. ಆಯಾ ವಿಭಾಗದ ಮುಖ್ಯಸ್ಥರು ನೇತೃತ್ವ ವಹಿಸಿದ್ದರು. ಪಿಆರ್‍ಡಿ ವತಿಯಿಂದ ಜಿಲ್ಲಾ ವಾರ್ತಾ ಕಚೇರಿ ಆವರಣ ಹಾಗೂ ಆಜಾದಿ ಉದ್ಯಾನವನ್ನು ಸ್ವಚ್ಛಗೊಳಿಸಲಾಯಿತು. ಸಿಬ್ಬಂದಿ ಆರ್. ಮನೋಜ್, ಸುನೋಜ್ ಮ್ಯಾಥ್ಯೂ, ಕೆ. ಪ್ರಸೀದಾ, ಆಶಾ, ಎಚ್. ಮಾಲತಿ ಮತ್ತು ಕನ್ನಡ ಅನುವಾದಕಿ ಬಿ. ಲೀಲಾವತಿ ಮತ್ತಿತರರು ನೇತೃತ್ವ ವಹಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries