HEALTH TIPS

ಸುಲ್ತಾನ್‌ಪುರದಲ್ಲಿ ತಾಯಿ ಪರ ವರುಣ್‌ ಗಾಂಧಿ ಪ್ರಚಾರ

 ಸುಲ್ತಾನ್‌ಪುರ: ಬಿಜೆಪಿ ಮುಖಂಡ ಹಾಗೂ ಪಿಲಿಭಿತ್ ಕ್ಷೇತ್ರದ ಸಂಸದ ವರುಣ್‌ ಗಾಂಧಿ ಅವರು ತಾಯಿ ಮೇನಕಾ ಗಾಂಧಿ ಪರ ಸುಲ್ತಾನ್‌ಪುರದಲ್ಲಿ ಗುರುವಾರ ಪ್ರಚಾರ ನಡೆಸಿದರು.

ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ದೇಶದೆಲ್ಲೆಡೆ ಚುನಾವಣೆ ನಡೆಯುತ್ತಿದೆ.

ಆದರೆ ಒಂದು ಪ್ರದೇಶದ ಜನರು ಮಾತ್ರ ತಮ್ಮ ಸಂಸದರನ್ನು 'ಸಂಸದ್‌ಜಿ', 'ಮಂತ್ರಿಜಿ' ಅಥವಾ ಹೆಸರಿನಿಂದ ಕರೆಯುವುದಿಲ್ಲ ಬದಲಾಗಿ 'ಮಾತಾಜಿ' ಎಂದು ಕರೆಯುತ್ತಾರೆ' ಎಂದು ಕ್ಷೇತ್ರದ ಜನರಿಗೆ ಮೇನಕಾ ಗಾಂಧಿ ಅವರ ಮೇಲಿರುವ ಗೌರವವನ್ನು ಉಲ್ಲೇಖಿಸಿದರು.

ವರುಣ್‌ ಗಾಂಧಿ ಸುಲ್ತಾನ್‌ಪುರದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದು, ಇದರಿಂದ ತಮ್ಮ ಗೆಲುವಿಗೆ ಅನುಕೂಲವಾಗಲಿದೆ ಎಂದು ಮೇನಕಾ ಗಾಂಧಿ ತಿಳಿಸಿದ್ದಾರೆ.

ವರುಣ್‌ ಅವರು ಈ ಬಾರಿಯ ಚುನಾವಣೆಯಲ್ಲಿ ಪ್ರಚಾರದಲ್ಲಿ ಪಾಲ್ಗೊಂಡಿದ್ದು ಇದೇ ಮೊದಲು. ಪಿಲಿಭಿತ್ ಕ್ಷೇತ್ರದಿಂದ ಸ್ಪರ್ಧಿಸಲು ವರುಣ್‌ ಅವರಿಗೆ ಬಿಜೆಪಿಯು ಟಿಕೆಟ್‌ ನಿರಾಕರಿಸಿತ್ತು. ಸುಲ್ತಾನ್‌ಪುರ ಕ್ಷೇತ್ರಕ್ಕೆ ಮೇ 25ರಂದು ಮತದಾನ ನಡೆಯಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries