HEALTH TIPS

ಕೆಂಪುಕಲ್ಲು ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಕಂದಾಯಾಧಿಕಾರಿಗಳ ದಆಳಿ, ವಾಹನಗಳು ವಶ

            ಕಾಸರಗೋಡು: ಮಂಜೇಶ್ವರ ತಾಲೂಕಿನ ಮೀಂಜ ಗ್ರಾಮದಲ್ಲಿ ಅಕ್ರಮವಾಗಿ ಕೆಂಪಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ನಾಲ್ಕು ಟಿಪ್ಪರ್ ಲಾರಿ ಹಾಗೂ ಒಂದು ಜೆಸಿಬಿಯನ್ನು ಕಂದಾಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.  ತಹಶೀಲ್ದಾರ್ ವಿ.ಶಿಬು ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ. ಹೆಡ್‍ಕ್ವಾಟ್ರಸ ಸಹಾಯಕ ತಹಸೀಲ್ದಾರ್ ಮಹಮ್ಮದ್ ಹಾರಿಸ್, ಉಪ ತಹಸೀಲ್ದಾರ್ ಜಿಗೀಶ್, ಗುಮಾಸ್ತರಾದ ನೌಶಾದ್, ಸಿದ್ದಿಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

              ಇನ್ನೊಂದು ಕಾರ್ಯಾಚರಣೆಯಲ್ಲಿ ಕಾಸರಗೋಡು ಭೂರೇಖಾ ತಹಸೀಲ್ದಾರ್ ಪಿ.ವಿ.ಮುರಳಿ ಹಾಗೂ ಗುಮಾಸ್ತ ಬಿ.ಅಭಿಷೇಕ್ ನೇತೃತ್ವದಲ್ಲಿ ಆದೂರು ಗ್ರಾಮ.ವ್ಯಾಪ್ತಿಯ ಅಲಿಯನಡ್ಕದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕೆಂಪುಕಲ್ಲು ಕ್ವಾರಿಯಿಂದ ಲಾರಿ ಹಾಗೂ ಮುನ್ನಾಡ್ ಗ್ರಾಮ ವ್ಯಾಪ್ತಿಯ ಚೆಂಬಕಾಡ್ ಗ್ರಾನೈಟ್ ಕ್ವಾರಿಯಿಂದ ಹಿಟಾಚಿಯನ್ನು ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನಿರ್ದೇಶದನ್ವಯ ಕಾರ್ಯಾಚರಣೆ ನಡೆಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries