ತಿರುವನಂತಪುರಂ: ಪೂಕೋಡ್ ಪಶುವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಜೆ.ಎಸ್.ಸಿದ್ಧಾರ್ಥ್ ಸಾವಿನ ಪ್ರಕರಣದಲ್ಲಿ ಕ್ರಮಕೈಗೊಳ್ಳಲು ವಿಫಲರಾದ ಅಧಿಕಾರಿಗೆ ಬಡ್ತಿ ನೀಡಲಾಗಿದೆ.
ಅಮಾನತುಗೊಂಡಿದ್ದ ಗೃಹ ಇಲಾಖೆ ಸೆಕ್ಷನ್ ಆಫೀಸರ್ ಬಿಂದು ಅವರಿಗೆ ಬಡ್ತಿ ನೀಡಲಾಗಿದೆ. ಬಂದರು ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಬಡ್ತಿ ನೀಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐಗೆ ಒಪ್ಪಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಘಟನೆ ನಂತರ, ಮೂವರು ಅಧಿಕಾರಿಗಳನ್ನು ತನಿಖೆಗಾಗಿ ಅಮಾನತುಗೊಳಿಸಲಾಗಿತ್ತು. ಇಲಾಖಾ ಕ್ರಮಕ್ಕೆ ಮುಂದಾಗಿಲ್ಲ ಎಂಬ ಉಲ್ಲೇಖದೊಂದಿಗೆ ಬಡ್ತಿ ನೀಡಲಾಗಿದೆ.
ಫೆಬ್ರವರಿ 18 ರಂದು ಕಾಲೇಜಿನಲ್ಲಿ ಸಿದ್ದಾರ್ಥ್ ಶವವಾಗಿ ಪತ್ತೆಯಾಗಿದ್ದರು. ಸಿಬಿಐನ ಮೊದಲ ಚಾರ್ಜ್ ಶೀಟ್ ನಲ್ಲಿ 20 ಆರೋಪಿಗಳಿದ್ದಾರೆ.