HEALTH TIPS

ಕುದಿಯುವ ಹಾಲು ಸೇವಿಸಿ ತೀವ್ರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲುಗೊಂಡ ಬುದ್ದಿಮಾಂದ್ಯ ಬಾಲಕ: ಗಂಭೀರಗೊಂಡ ಘಟನೆ

                ಕಣ್ಣೂರು: ಅಂಗನವಾಡಿಯಲ್ಲಿ ಕುದಿಯುವ ಹಾಲು ಸೇವಿಸಿ ವಿಶೇಷ ಚೇತನ ಮಗುವೊಂದು ತೀವ್ರ ಸುಟ್ಟ ಗಾಯಗಳಾಗಿರುವ ದೂರು ಬಂದಿದೆ. ಕೋಝಿಕ್ಕೋಡ್ ಸರ್ಕಾರಿ  ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ನಾಲ್ಕು ದಿನಗಳಿಂದ ಆಹಾರ ಮತ್ತು ನೀರನ್ನು ಸೇವಿಸಲು ಮಗುವಿಗೆ ಸಾಧ್ಯವಾಗುತ್ತಿಲ್ಲ.

                ಬುದ್ಧಿಮಾಂದ್ಯ ಹಾಗೂ ಮಾತು ಬಾರದ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಿಸಿ ಕುದಿಯುತ್ತಿದ್ದ ಹಾಲನ್ನು ಬಾಯಿಗೆ ಸುರಿಯಲಾಗಿದೆ ಎಂದು ಮಗುವಿನ ಸಂಬಂಧಿಕರು ಹೇಳುತ್ತಾರೆ. ಅಂಗನವಾಡಿ ಸಿಬ್ಬಂದಿ ವಿರುದ್ಧ ಬಾಲಕನ ಸಂಬಂಧಿಕರು ಪಿಣರಾಯಿ ಪೋಲೀಸರಿಗೆ ದೂರು ನೀಡಿದ್ದಾರೆ.

              ಬಾಯಿಯ ಸುತ್ತ ಚರ್ಮ ಸುಟ್ಟ ಸ್ಥಿತಿಯಲ್ಲಿದೆ. ಪಿಣರಾಯಿ 18ನೇ ವಾರ್ಡ್‍ನ ಕೋಲಾಡ್ ಅಂಗನವಾಡಿಯಲ್ಲಿ  ಈ ಘಟನೆ ನಡೆದಿದೆ.  ಬೆಳಗ್ಗೆ ಶಿಕ್ಷಕಿ ತಾಯಿಗೆ ಕರೆ ಮಾಡಿ ಮಗನನ್ನು ಅಂಗನವಾಡಿಗೆ ಕರೆತರುವಂತೆ ಹೇಳಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಅರ್ಧ ಗಂಟೆಯ ನಂತರ ಮತ್ತೆ ತಾಯಿಗೆ ಪೋನ್ ಮಾಡಿ ಮಗುವಿಗೆ ಹುಷಾರಿಲ್ಲ ಎಂದು ಹೇಳಿದರು. ಅಂಗನವಾಡಿ ತಲುಪಿದಾಗ ಮಗುವಿನ ಬಾಯಿಗೆ ಸುಟ್ಟ ಗಾಯಗಳಾಗಿದ್ದನ್ನು ಕಂಡೆ ಎಂದು ತಾಯಿ ಹೇಳುತ್ತಾರೆ. ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಶಿಕ್ಷಕಿ ಮತ್ತು ಅಯಾ ಉತ್ಸಾಹ ತೋರಿಸಿಲ್ಲ ಎಂದು ತಾಯಿ ಹೇಳುತ್ತಾರೆ.

             ಮಗುವನ್ನು ಪಿಣರಾಯಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಬಾಲಕನ ಸ್ಥಿತಿ ಹದಗೆಟ್ಟಿದ್ದು, ತಲಶ್ಶೇರಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಲ್ಲಿಂದ ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries