ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪಸನ್ನಿಧಿಯಲ್ಲಿ ವೃಷಭ ಮಾಸದ ಪೂಜೆ ಹಾಗೂ ಪ್ರತಿಷ್ಠಾ ದಿನಾಚರಣೆಗಾಗಿ ನಾಳೆ (ಮಂಗಳವಾರ)ಬಾಗಿಲು ತೆರೆಯಲಾಗುವುದು. ಸಂಜೆ 5 ಗಂಟೆಗೆ ತಂತ್ರಿ ಕಂಠಾರರ್ ಮಹೇಶ್ ಮೋಹನ್ ಅವರ ಉಪಸ್ಥಿತಿಯಲ್ಲಿ ಮೇಲ್ಶಾಂತಿ ಪಿ.ಎನ್. ಮಹೇಶ ನಂಬೂದಿರಿ ದೀಪ ಬೆಳಗಿಸುವರು. ಮಾಳಿಗಪ್ಪುರಂ ನಲ್ಲಿ ಮೇಲ್ಶಾಂತಿ ಪಿ.ಎನ್. ಮುರಳಿ ನಂಬೂದಿರಿ ದೀಪ ಬೆಳಗಿಸುವರು.
ನಂತರ ಹದಿನೆಂಟನೇ ಮೆಟ್ಟಿಲಿನ ಮುಂಭಾಗದಲ್ಲಿರುವ ದೊಡ್ಡ ಯಜ್ಞಕುಂಡದಲ್ಲಿ ಅಗ್ನಿ ಬೆಳಗಿಸಲಾಗುವುದು. ಇದರೊಂದಿಗೆ ಅಯ್ಯಪ್ಪ ಭಕ್ತರು ದೇವಾಲಯ ಪ್ರವೇಶಿಸಿ ದರ್ಶನ ಪಡೆಯಲಿದ್ದಾರೆ. 15ರಂದು ಬೆಳಗ್ಗೆ ನಿತ್ಯ ಪೂಜೆ, ಅಭಿಷೇಕ, ತುಪ್ಪಾಭಿಷೇಕ ಆರಂಭವಾಗಲಿದೆ. 18 ರಂದು ಪ್ರತಿಷ್ಠಾ ದಿನ ಆಚರಿಸಲಾಗುತ್ತದೆ. ಪೂಜೆಗಳು ಮುಗಿದ ನಂತರ 19 ರಂದು ರಾತ್ರಿ 10 ಗಂಟೆಗೆ ಗರ್ಭಗೃಹ ಮುಚ್ಚಲಾಗುವುದು.