HEALTH TIPS

ರಾಜ್ಯದಲ್ಲಿ ಮತ್ತೆ ಆರೋಗ್ಯ ಕಾರ್ಯಕರ್ತರ ಮೇಲೆ ದೌರ್ಜನ್ಯ; ವೈದ್ಯರಿಗೆ ಥಳಿಸಿದ ಚಿಕಿತ್ಸೆಗೆ ಬಂದ ರೋಗಿ

Top Post Ad

Click to join Samarasasudhi Official Whatsapp Group

Qries

              ಕೋಯಿಕ್ಕೋಡ್: ಕೊಡಂಚೇರಿಯಲ್ಲಿ ಚಿಕಿತ್ಸೆಗೆ ಬಂದ ರೋಗಿ ವೈದ್ಯರಿಗೆ ಥಳಿಸಿದ್ದಾರೆ. ಹೋಲಿ ಕ್ರಾಸ್ ಆಸ್ಪತ್ರೆಯ ವೈದ್ಯೆ ಸುಸ್ಮಿತ್ ಗೆ ಥಳಿಸಿದ್ದಾರೆ. ಮೊನ್ನೆ ರಾತ್ರಿ 12 ಗಂಟೆಗೆ ಈ ಘಟನೆ ನಡೆದಿದೆ.

           ಯುವಕ ಕಾರು ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಗಮಿಸಿದ್ದ. ವೈದ್ಯರು ಪ್ರಥಮ ಚಿಕಿತ್ಸೆ ನೀಡಿದರೂ ಸಮರ್ಪಕ ಚಿಕಿತ್ಸೆ ನೀಡಿಲ್ಲ ಎಂದು ಅಸಭ್ಯವಾಗಿ ಬೈದು ಹಂಗಿಸಿದ್ದಾನೆ.  ಬಳಿಕ ಭದ್ರತಾ ಸಿಬ್ಬಂದಿ ಬಂದು ಗೇಟ್‍ನಿಂದ ಹೊರ ಹಾಕಿದ್ದಾರೆ. ಗೇಟ್ ದಾಟಿ ಹೊರ ಬಂದಾಗ ಹೊಂಚು ಹಾಕಿದ್ದ ವ್ಯಕ್ತಿ ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಕಲ್ಲು ಸೇರಿದಂತೆ ದಾಳಿಗೆ ಯತ್ನಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿವೆ.

           ಘಟನೆ ಕುರಿತು ಪೋಲೀಸರು ತನಿಖೆ ಆರಂಭಿಸಿದ್ದಾರೆ. 4 ಗಂಟೆಗೆ ಪೋಲೀಸರು ವೈದ್ಯರು ಹಾಗೂ ಇತರರ ಹೇಳಿಕೆ ದಾಖಲಿಸಿಕೊಂಡರು. ಯುವಕನ ವಿರುದ್ಧ ಪ್ರಕರಣ ಇನ್ನೂ ದಾಖಲಾಗಿಲ್ಲ.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries