ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ಪ್ರತಿಷ್ಟಾ ದಿನ ವಾರ್ಷಿಕೋತ್ಸವ ಚಂಡಿಕಾ ಹೋಮದೊಂದಿಗೆ ನೆರವೇರಿತು. ಹಾರ್ನಾಡು ಕೆ ಯು ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಗಣಹೋಮ, ಶುದ್ದಿಕಲಶ ಕಲಶಾಭಿಷೇಕ, ವಿಗ್ರಹಪೂಜೆ ನಡೆಯಿತು.
ಕೂಡ್ಲು ನಾಗೇಂದ್ರ ಭಟ್ ನೇತೃತ್ವದಲ್ಲಿ ಚಂಡಿಕಾಹೋಮ ನಡೆಯಿತು. ಮಹಾಪೂಜೆ, ಶ್ರೀ ಮಹಾತಾಯಿಯ ದರ್ಶನ ಸೇವೆ, ಪಾಂಗೋಡು ಶ್ರೀ ದುರ್ಗಾ ಭಜನಾ ಸಂಘದ ಸದಸ್ಯರಿಂದ ಸಾಮೂಹಿಕ ಲಲಿತಾ ಸಹಸ್ರ ನಾಮ ಪಾರಾಯಣ ನಡೆಯಿತು. ಧಾರ್ಮಿಕ ಮುಂದಾಳು ಕೆ.ಎನ್ ವೆಂಕಟ್ರಮಣ ಹೊಳ್ಳ, ದೇವಸ್ಥಾನ ಸಮಿತಿ ಅಧ್ಯಕ್ಷರಾಧ ವಾಮನ್ ರಾವ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.