ಕಾಸರಗೋಡು: ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ರಾಜ್ಯ ಮಟ್ಟದ ಸಾಂಸ್ಕøತಿಕ ಕಾರ್ಯಕ್ರಮ ಇತ್ತೀಚೆಗೆ ಪಾಲಕ್ಕಾಡಿನಲ್ಲಿ ಜರಗಿತು. ಈ ಸಂದರ್ಭ ಕಾಸರಗೋಡಿನ ಐ ಎಂ.ಎ. ತಂಡದ ವತಿಯಿಂದ ನಡೆದ ಯಕ್ಷಗಾನ ಪ್ರದರ್ಶನ ಜನಮನ ಸೆಳೆಯಿತು.
ಪಾಲಕಾಡ್ ಟ್ರೈಪೆಂಟಾ ಹೋಟಲಿನ ಸಭಾಂಗಣದಲ್ಲಿ ನಡೆದ "ಸಮನ್ವಯ" ಕಾರ್ಯಕ್ರಮದಲ್ಲಿ ಕಾಸರಗೋಡಿನ ಸದಸ್ಯ, ಹಿರಿಯ ವೈದ್ಯ ಡಾ.ಜನಾರ್ದನ ನಾಯ್ಕ್ ರವರ ನೇತೃತ್ವದಲ್ಲಿ, ಹಿರಿಯ ಯಕ್ಷಗಾನ ಕಲಾವಿದ ರಂಜಿತ್ ಗೋಳಿಯಡ್ಕರವರ ದಿಗ್ದರ್ಶನದಲ್ಲಿ ನರಕಾಸುರ ಮೋಕ್ಷ ಆಖ್ಯಾಯಿಕೆಯ ಯಕ್ಷಗಾನ ಪ್ರದರ್ಶನ ನಡೆಯಿತು.
ಮುಮ್ಮೇಳದಲ್ಲಿ ಡಾ.ಜನಾರ್ದನ ನಾಯ್ಕ್, ಡಾ. ನಾರಾಯಣ ನಾಯ್ಕ್, ಡಾ. ಖಾಸಿಂ, ಡಾ ಹರಿಕಿರಣ ಬಂಗೇರ, ಡಾ. ಜ್ಯೋತಿ, ಡಾ.ಮಾಯ ಮಲ್ಯ. ಕುಮಾರಿ.ಹಿಮಜ ಬಾಯಿ ಭಾಗವಹಿಸಿದರು. ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟರಮಣ ಭಟ್(ಭಾಗವತಿಕೆ), ಹರೀಶ್ ರಾವ್, ರಂಜಿತ್ ಗೋಳಿಯಡ್ಕ, ಅರ್ಜುನ, ರಜಿತ್, ರಾಕೇಶ್, ಚೇತನ್(ಚೆಂಡೆ-ಮದ್ದಳೆ) ಸಹಕರಿಸಿದರು.
ಮಲೆಯಾಳ ಪ್ರೇಕ್ಷಕರಿಂದ ಕಾಸರಗೋಡಿನ ಕನ್ನಡ ಯಕ್ಷಗಾನಕ್ಕೆ ಬೆರಗುಗಣ್ಣುಗಳೊಂದಿಗಿನ ಕರತಾಡನದ ಪ್ರೋತ್ಸಾಹ ವ್ಯಕ್ತವಾಯಿತು. ಐ.ಎಂ.ಎ. ಯ ರಾಜ್ಯಾಧ್ಯಕ್ಷ ಡಾ. ಜೋಸಫ್ ಬೆನವನ್ ಕಲಾವಿದರನ್ನು ಗೌರವಿಸಿ ಅಭಿನಂದಿಸಿದರು.