HEALTH TIPS

ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಜಾಗೃತಿ-ಕಾಸರಗೋಡಿನಿಂದ ತಿರುವನಂತಪುರ ವರೆಗೆ ಪಾದಯಾತ್ರೆ ಆರಂಭಿಸಿದ ಪದ್ಮರಾಜ್

                   ಕಾಸರಗೋಡು: ವಿಶ್ವ ಪರಿಸರ ದಿನಾಚರಣೆಯ ಪೂರ್ವಭಾವಿಯಾಗಿ 'ನೋ ಪ್ಲಾಸ್ಟಿಕ್-ಬೀ ಫೆಂಟಾಸ್ಟಿಕ್'ಎಂಬ ಆಂಗ್ಲ ಭಾಷೆಯ ಸಂದೇಶದೊಂದಿಗೆ ಪರಿಸರ ಹೋರಾಟಗಾರ ಆರ್. ಪದ್ಮರಾಜನ್ ಕಾಸರಗೋಡಿನಿಂದ ತಿರುವನಂತಪುರ ವರೆಗೆ ಜಾಗೃತಿ ಸಂದೇಶದ ಪಾದಯಾತ್ರೆ ಆರಂಭಿಸಿದ್ದಾರೆ.

                 ಕೊಲ್ಲಂ ಜಿಲ್ಲಾ ಶುಚಿತ್ವ ಮಿಷನ್, ಕೊಟ್ಟಿಯಮ್ ರೋಟರಿ ಕ್ಲಬ್, ಕಾಸರಗೋಡು ಜಿಲ್ಲಾ ಶುಚಿತ್ವ ಮಿಷನ್‍ನ ಸಹಯೋಗದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.  ಕಾಸರಗೋಡು ಪದ್ಮಶ್ರೀ ಅಲಿಮಾಣಿಕ್‍ಫಾನ್ ಇಂಟರ್‍ನ್ಯಾಶನಲ್ ಇನ್‍ಸ್ಟಿಟ್ಯೂಟ್ ಫಾರ್ ಓಷಿಯಾನೋಗ್ರಫಿ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಳ್ಳಲಾಗಿದೆ. ಕಾಸರಗೋಡು ವಿದ್ಯಾನಗರದ ಸಿವಿಲ್ ಸಟೇಶನ್ ವಠಾರದಲ್ಲಿ ನಡೆದ ಸಮಾರಂಬದಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಐಎಎಸ್ ಪಾದಯಾತ್ರೆಗೆ ಚಾಲನೆ ನೀಡಿದರು. ತಿರುವನಂತಪುರಕ್ಕೆ ಜೂನ್ 5 ರಂದು ತಲುಪಲಿರುವ ಪಾದಯಾತ್ರೆ, ವಿಶ್ವ ಪರಿಸರ ದಿನಾಚರಣೆಯೊಂದಿಗೆ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. ಕೊಟ್ಟಿಯಂ ರೋಟರಿ ಕ್ಲಬ್ ಅಧ್ಯಕ್ಷ ಶಿಬು ರಾವುತರ್, ಕೋ-ಆರ್ಡಿನೇಟರ್ ರಾಜನ್ ಕೈನೋಸ್, ಕಾಸರಗೋಡು ರೋಟರಿ ಕ್ಲಬ್ ಅಧ್ಯಕ್ಷ ಗೌತಮ್ ಭಕ್ತ, ಕಾರ್ಯದರ್ಶಿ ಶ್ರೀಜೇಶ್, ಚೈಲ್ಡ್ ಪೆÇ್ರಟೆಕ್ಟ್ ರಾಜ್ಯಾಧ್ಯಕ್ಷ ಸಿ.ಕೆ.ನಾಸರ್, ಇಸಾಕುಞÂ ಸೀತಾಂಗೋಳಿ ಉಪಸ್ಥಿತರಿದ್ದರು.


ಜೀವಸಂಕುಲ ಹಾಗೂ ಪರಿಸರಕ್ಕೆ ಪ್ಲಾಸ್ಟಿಕ್‍ನಿಂದ ಹೆಚ್ಚಿನ ಹಾನಿ ಸಂಭವಿಸುತ್ತಿದ್ದು, ಇದರ ಬಳಕೆ ಬಗ್ಗೆ ಜನತೆ ಇನ್ನೂ ಜಾಗೃತರಾಗಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿರುವುದರಿಂದ ಭೂಮಿಗೆ ಬಂಜೆತನ ಕಾಡಲಾರಂಭಿಸಿದೆ. ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಮೂಡಿಸುವುದು ಯತ್ರೆ ಉದ್ದೇಶವಾಗಿದೆ ಎಂಬುದಾಗಿ ಪದ್ಮರಾಜ್ ತಿಳಿಸಿದ್ದಾರೆ.

            ಪರಿಸರ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಚಾಲನೆ 
            ಕೊಲ್ಲಂ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಆರ್. ಪದ್ಮಜನ್ ನೇತೃತ್ವದಲ್ಲಿ ಕಾಸರಗೋಡಿನಿಂದ ತಿರುವನಂತಪುರದವರೆಗೆ ನಡೆದ ಜಾಗೃತಿ ಪಾದಯಾತ್ರೆ - ಕೇರಳ ಯಾತ್ರೆಗೆ ಜಿಲ್ಲಾಧಿಕಾರಿ ಕೆ.ಇಂಪಶೇಖರ್ ಅವರು ಚಾಲನೆ ನೀಡಿದರು. ಸ್ವಚ್ಛತಾ ಮಿಷನ್ ಜಿಲ್ಲಾ ಸಂಯೋಜಕ ಎ. ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries