ಕಾಸರಗೋಡು: ಕಲ್ಯೋಟ್ ಜೋಡಿ ಕೊಲೆ ಪ್ರಕರಣದ ಆರೋಪಿ ಪುತ್ರನ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡರನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ತೀವ್ರವಾಗಿ ಟೀಕಿಸಿದ್ದಾರೆ.
ಹುತಾತ್ಮರ ಆತ್ಮಕ್ಕೆ ನೋವುಂಟು ಮಾಡುವವರಿಗೆ ಕ್ಷಮೆ ಇಲ್ಲ ಎಂದು ಉಣ್ಣಿತ್ತಾನ್ ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿದ್ದಾರೆ.
'ಧರ್ಮ ಸಂಸ್ಥಾಪನೆಗಾಗಿ ಶ್ರೀಕೃಷ್ಣ ಕಂಸನನ್ನು ಕೊಂದ. ಅದೇ ರೀತಿ ಸಿಪಿಎಂ ಕಲ್ಯೋಟ್ ನ ಶರತ್ ಲಾಲ್ ಮತ್ತು ಕೃಪೇಶ್ ಅವರನ್ನು ಧರ್ಮ ಸಂಸ್ಥಾಪನೆಗಾಗಿ ಕೊಂದರೆಂದು ಹೋಲಿಸಿದ ಪೆರಿಯ ಸಿಪಿಎಂ ಮುಖಂಡನ ಹೇಳಿಕೆ ಹಾಸ್ಯಾತ್ಪದ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಾಲಕೃಷ್ಣನ್ ಕುಟುಂಬ ವಿವಾಹ ಸಮಾರಂಭದಲ್ಲಿ ಹುತಾತ್ಮರನ್ನು ಮರೆತರು. ಎಷ್ಟೇ ಆಗಲಿ ಕಾಂಗ್ರೆಸ್ ನಾಯಕರು ಎಷ್ಟು ಎತ್ತರದಲ್ಲಿದ್ದರೂ ಕಾಂಗ್ರೆಸ್ ಮತ್ತು ಹುತಾತ್ಮರನ್ನು ಪ್ರೀತಿಸುವವರಿಗೆ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಅವೆಲ್ಲವನ್ನೂ ಕಟುವಾಗಿ ನಿರಾಕರಿಸಲಾಗಿದೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಹುತಾತ್ಮರ ಕುಟುಂಬಗಳಿಗೆ ಸರಿಪಡಿಸಲಾಗದ ಅಪರಾಧ ಮಾಡಿದ್ದಾರೆ ಎಂದು ಉಣ್ಣಿತ್ತಾನ್ ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಕಲ್ಯೋಟ್ ಹತ್ಯೆಯ ನಂತರ ಕಾಂಗ್ರೆಸ್ ಪಕ್ಷದ ನೂರಾರು ಕುಟುಂಬಸ್ಥರು ನಕಲಿ ಪ್ರಕರಣಗಳಲ್ಲಿ ಸಿಲುಕಿ ಪೋಲೀಸ್ ಠಾಣೆ, ಕೋರ್ಟ್ ಗಳಿಗೆ ಎಡತಾಕಿ ನರಳುತ್ತಿದ್ದಾರೆ. ಈ ಮಧ್ಯೆ ನಾಯಕರ ಈ ಅಸಂಬದ್ಧ ನಾಟಕ. ಬಲಿಪಶುವಿನ ಜೊತೆ ನಟಿಸುವ ಮತ್ತು ಕಳ್ಳ ಬೇಟೆಗಾರರ ಪರವಾಗಿ ನಿಲ್ಲುವ ಕೃತ್ಯವನ್ನು ಯಾರು ಮಾಡಿದರೂ ಅದು ಹೇಯ, ನೀಚ ಮತ್ತು ಅಕ್ಷಮ್ಯ ಎಂದು ಉಣ್ಣಿತ್ತಾನ್ ಬರೆದಿರುವರು.