ತ್ರಿಶೂರ್: ತನ್ನದೇ ಗೂಗಲ್ ಪೇ ನಂಬರ್ ಮೂಲಕ ಸೇವೆಗೆ ಹಣ ಪಡೆದ ದೇವಸ್ವಂ ಬೋರ್ಡ್ ನೌಕರನನ್ನು ಅಮಾನತುಗೊಳಿಸಲಾಗಿದೆ. ತ್ರಿಶೂರಿನ ಕುಲಸ್ಸೆರಿ ದೇವಸ್ಥಾನದ ದೇವಸ್ವಂ ಉದ್ಯೋಗಿ ವಿ. ಸಂತೋಷ್ ಅವರನ್ನು ಅಮಾನತುಗೊಳಿಸಲಾಗಿದೆ. ದೇವಸ್ಥಾನದ ಬೋರ್ಡ್ ಮೇಲೆ ಸ್ವಂತ ಪೋನ್ ನಂಬರ್ ಬರೆದು ಪ್ರದರ್ಶಿಸಿ ವಂಚನೆ ಮಾಡಿದ್ದಾರೆ ಎಂದು ದೃಢಪಟ್ಟಿದೆ.
ಜೊತೆಗೆ ಅವರು ಸ್ವಂತ ಖಾತೆಯ ಮೂಲಕ ಪಡೆದ ಹಣವನ್ನು ದೇವಸ್ವಂ ಮಂಡಳಿಗೆ ಪಾವತಿಸಿಲ್ಲ ಎಂದು ದೇವಸ್ವಂ ಮಂಡಳಿಯ ಜಾಗೃತ ವಿಭಾಗ ಪತ್ತೆ ಮಾಡಿದೆ. ಅಕ್ಟೋಬರ್ 2023 ರಲ್ಲಿ, ದೇವಸ್ವಂ ಈ ಬಗ್ಗೆ ದೂರು ಸ್ವೀಕರಿಸಿತು. ಆದರೆ ತನಿಖೆ ಆಮೆಗತಿಯಲ್ಲಿ ಕೊನೆಗೂ ಪೂರ್ಣಗೊಂಡಿತು ಮತ್ತು ವಿಜಿಲೆನ್ಸ್ ವರದಿಯನ್ನು ಫೆಬ್ರವರಿ 2024 ರಲ್ಲಿ ಸಲ್ಲಿಸಲಾಯಿತು.