ಕಾಸರಗೋಡು: ಮುಳಿಯಾರು ಪಂಚಾಯಿತಿಯ ಕಾನತ್ತೂರು ಸನಿಹದ ಕರಿವೇಡಗಂ-ಬಾವಿಕೆರೆ ರಸ್ತೆ ಮಧ್ಯೆ ಚಿರತೆಯೊಂದು ಕಂಡುಬಂದಿರುವ ಬಗ್ಗೆ ವದಂತಿ ಹರಡಿದೆ. ಸಿನಿಮಾ ನೋಡಿ ಕಾರಿನಲ್ಲಿ ವಾಪಸಾಗುತ್ತಿದ್ದವರು ರಸ್ತೆ ಬದಿ ಚಿರತೆಯೊಂದು ಸಾಗುತ್ತಿರುವುದನ್ನು ಕಂಡಿದ್ದು, ಅಲ್ಪ ಹೊತ್ತಿನಲ್ಲಿ ಚಿರತೆ ಕಾಡು ಪ್ರವೇಶಿಸಿರುವುದಾಗಿ ಸ್ಥಳೀಯರಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದ್ದು, ಚಿರತೆ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಚಿರತೆ ಸಂಚಾರದ ವದಂತಿ ಬಗ್ಗೆ ಕಾನತ್ತೂರು ಆಸುಪಾಸಿನ ಜನತೆ ಆತಂಕ್ಕೀಡಾಗಿದ್ದಾರೆ.