HEALTH TIPS

ಔಷಧ ಖರೀದಿಗೆ ತೆರಳಿದ್ದ ಮಹಿಳೆ ನಾಪತ್ತೆ-ದೂರು

                     ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನಾರಂಪಾಡಿ ನಿವಾಸಿ ಲೀಲಾವತೀ(60)ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಔಷಧ ಖರೀದಿಗಾಗಿ ಬದಿಯಡ್ಕ ತೆರಳುವುದಾಗಿ ಮನೆಯಿಂದ ಹೊರಟವರು ವಾಪಸಾಗಿಲ್ಲ ಎಂದು ಪುತ್ರ ನೀಡಿದ ದೂರಿನನ್ವಯ ಕೇಸು ದಾಖಲಾಗಿದೆ.

              ಈ ಮಧ್ಯೆ ಬದಿಯಡ್ಕ ತಲುಪಿದ್ದ ಲೀಲಾವತೀ ಅವರು ಆಟೋರಿಕ್ಷಾ ಒಂದರಲ್ಲಿ ಕುಂಬಳೆ ತೆರಳಿದ್ದಾರೆ. ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸನಿಹ ರಿಕ್ಷಾದಿಂದ ಇಳಿದಿದ್ದು, ನಂತರ ಈ ರಿಕ್ಷಾ ಬೇರೊಂದು ಬಾಡಿಗೆಯನ್ವಯ ಮಂಜೇಶ್ವರ ತೆರಳಿದೆ. ಅಲ್ಲಿಂದ ವಾಪಸಾಗುವ ಮಧ್ಯೆ ಮಹಿಳೆ ಕುಂಬಳೆ ಸೇತುವೆ ಸನಿಹ ನಡೆದುಹೋಗುತ್ತಿರುವುದನ್ನು ಕಂಡಿರುವುದಾಗಿ ಆಟೋ ಚಾಲಕ ತಿಳಿಸಿದ್ದರು. ಕೆಲವು ದಿವಸಗಳ ಹಿಂದೆ ಅಪಘಾತವೊಂದರಲ್ಲಿ ಕಾಲಿಗೆ ಉಂಟಾದ ಗಾಯದಿಂದ ಇವರು ಕುಂಟುತ್ತಾ ನಡೆಯುತ್ತಿದ್ದರೆನ್ನಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries