HEALTH TIPS

ನೀರ್ಚಾಲಲ್ಲಿ ವಿಹಿಂಪ ದುರ್ಗಾವಾಹಿನಿ ಶೌರ್ಯ ಶಿಕ್ಷಣವರ್ಗಕ್ಕೆ ಚಾಲನೆ

                  ಬದಿಯಡ್ಕ: ವಿಶ್ವಹಿಂದೂ ಪರಿಷತ್ ದುರ್ಗಾವಾಹಿನಿ ಕೇರಳ ಪ್ರಾಂತ ಶೌರ್ಯ ಶಿಕ್ಷಣವರ್ಗಕ್ಕೆ ಸೋಮವಾರ ಬೆಳಗ್ಗೆ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಸ್ಕೂಲಿನಲ್ಲಿ ಚಾಲನೆ ನೀಡಲಾಯಿತು. ಕಾಸರಗೋಡು ಚಿನ್ಮಯ ಮಿಶನ್‍ನ ಬ್ರಹ್ಮಚಾರಿಣಿ ದಿಶಾ ಚೈತನ್ಯ ಸ್ವಾಮಿನಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮಾತೆಯರೂ ಬಲಿಷ್ಠರಾಗಿ ಎಲ್ಲಾ ಕಾರ್ಯಗಳನ್ನೂ ಅಚ್ಚುಕಟ್ಟಾಗಿ ಮುನ್ನಡೆಸಿಕೊಂಡು ಹೋಗುವ ಸಾಮಥ್ರ್ಯವನ್ನು ಹೊಂದಿರಬೇಕು. ನಮ್ಮ ಸಮಾಜ, ಮಕ್ಕಳ ರಕ್ಷಣೆ ನಮ್ಮ ಹೊಣೆಯಾಗಿದೆ ಎಂದರು.

             ವಿಶ್ವಹಿಂದೂ ಪರಿಷತ್ ಕೇರಳ ರಾಜ್ಯ ಕಾರ್ಯದರ್ಶಿ ವಿ.ಆರ್.ರಾಜಶೇಖರ್ ಬೌದ್ಧಿಕ್ ನಡೆಸಿಕೊಟ್ಟರು. ಕಿಶೋರಿ ತಾಯಿಜಿ ಉಪಸ್ಥಿತರಿದ್ದರು. ಜಿಲ್ಲಾ ಸಂಘ ಚಾಲಕ್ ಪ್ರಭಾಕರ ನಾಯಕ್, ಕಣ್ಣೂರು ವಿಭಾಗ ಮಾತೃಶಕ್ತಿ ಸಂಯೋಜಕಿ ಮೀರಾ ಆಳ್ವ ಉಪಸ್ಥಿತರಿದ್ದರು. ಶಿಬಿರಾಧಿಕಾರಿ, ಕೇರಳ ದುರ್ಗಾವಾಹಿನಿ ಸಹಸಂಯೋಜಕಿ ನೀತು ಸ್ವಾಗತಿಸಿದರು. ಲಕ್ಷ್ಮೀ ವೈಯಕ್ತಿಕ ಗೀತೆ ಹಾಡಿದರು. ಶಿಕ್ಷಕಿ ಮಂಜುಳಾ ನಿರೂಪಿಸಿದರು. 300ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಶಿಬಿರವು ಮುಂದಿನ ಸೋಮವಾರದ ತನಕ ನಡೆಯಲಿರುವುದು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries