ಚೆನ್ನೈ: ಮುಲ್ಲಪೆರಿಯಾರ್ ನಲ್ಲಿ ಹೊಸ ಅಣೆಕಟ್ಟು ನಿರ್ಮಿಸುವ ಕೇರಳದ ಕ್ರಮಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಡೆ ಒಡ್ಡಿದ್ದಾರೆ.
ಪರಿಸರ ಅನುಮತಿ ಪಡೆಯುವ ಕೇರಳದ ಕ್ರಮಕ್ಕೆ ಅವಕಾಶ ನೀಡಬಾರದು ಎಂದು ಕೇಂದ್ರ ಪರಿಸರ ಸಚಿವಾಲಯಕ್ಕೆ ಪತ್ರ ಕಳುಹಿಸಲಾಗಿದೆ.
ತಮಿಳುನಾಡಿನ ಅನುಮತಿ ಇಲ್ಲದೆ ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸ್ಟಾಲಿನ್ ಸರ್ಕಾರ ಶೀಘ್ರದಲ್ಲೇ ಕೇಂದ್ರದ ಮೊರೆ ಹೋಗಲಿದೆ. ಕೇರಳದ ಹೊಸ ಕ್ರಮವು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತದೆ ಮತ್ತು ಅದರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಪರಿಸರ ಪರಿಣಾಮ ಅಧ್ಯಯನ ನಡೆಸುವಂತೆ ಕೇರಳದ ಮನವಿಯನ್ನು ಪರಿಸರ ಸಚಿವಾಲಯ ಪರಿಗಣಿಸುತ್ತಿರುವಾಗಲೇ ತಮಿಳುನಾಡು ಕೇಂದ್ರದ ಮೊರೆ ಹೋಗಿದೆ. ಕೇಂದ್ರದ ಒಪ್ಪಿಗೆ ದೊರೆತರೆ 7 ವರ್ಷಗಳಲ್ಲಿ ಮುಲ್ಲಪೆರಿಯಾರ್ ನಲ್ಲಿ ಹೊಸ ಅಣೆಕಟ್ಟು ನಿರ್ಮಿಸಲು ಕೇರಳ ನಿರ್ಧರಿಸಿದೆ.