HEALTH TIPS

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಬರಲಿವೆ ಕ್ಷಿಪ್ರ ಪ್ರತಿಕ್ರಿಯೆ ತಂಡಗಳು

             ತಿರುವನಂತಪುರ: ಮಾನವ-ವನ್ಯಜೀವಿ ಸಂಘರ್ಷವನ್ನು ತಗ್ಗಿಸಲು ಅರಣ್ಯ ಮತ್ತು ವನ್ಯಜೀವಿ ಇಲಾಖೆಯಲ್ಲಿ ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು (ಆರ್‍ಆರ್‍ಟಿ) ರಚಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಒಂಬತ್ತು ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ರಚಿಸಲಾಗುತ್ತಿದೆ.

             ಇದರ ಅನುಷ್ಠಾನಕ್ಕಾಗಿ ಸೆಕ್ಷನ್ ಫಾರೆಸ್ಟ್ ಆಫೀಸರ್, ಫಾರೆಸ್ಟ್ ಡ್ರೈವರ್ ಮತ್ತು ಪಾರ್ಟ್ ಟೈಮ್ ಸ್ವೀಪರ್ ತಲಾ ಒಂಬತ್ತು ಹುದ್ದೆಗಳನ್ನು ಸೃಷ್ಟಿಸಲಾಗುವುದು. ಹೊಸದಾಗಿ ರಚನೆಯಾದ ಆರ್.ಆರ್.ಟಿ ಗಳು ತಿರುವನಂತಪುರಂ ವಿಭಾಗದ ಪಾಲೋಡ್ ಮತ್ತು ಪುನಲೂರು ವಿಭಾಗದ ತೆನ್ಮಲದಲ್ಲಿವೆ.

               ಕೊಟ್ಟಾಯಂ ವಿಭಾಗದ ವಂದನ್‍ಪಟಲ್, ಮಂಕುಲಂ ವಿಭಾಗದ ಕಡಲಾರ್ ಮತ್ತು ಕೋತಮಂಗಲಂ ವಿಭಾಗದ ಪಾಲಪಿಲ್ಲಿ, ನೆನ್ಮಾರಾ ವಿಭಾಗದ ಕೊಲ್ಲಂಗೋಡ್, ನಿಲಂಬೂರ್ ದಕ್ಷಿಣ ವಿಭಾಗದ ಕರುವಾರಕುಂಡ್ ಮತ್ತು ಉತ್ತರ ವಯನಾಡು ವಿಭಾಗದ ಮಾನಂತವಾಡಿಯಲ್ಲಿಯೂ ಆರ್‍ಆರ್‍ಟಿ ರಚನೆಯಾಗಲಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries